February 28th, 2010
ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು [...]
March 3rd, 2009
ಮೊನ್ನೆ ಸಂಪನ್ನಗೊಂಡ ಶಿವರಾತ್ರಿಯ ಬಗ್ಗೆ ಹೊಸದಿಗಂತದ ಪ್ರಧಾನ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ರವರು ತಮ್ಮ ನೇರನುಡಿ ಅಂಕಣದಲ್ಲಿ ಅನುಭವ – ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಓದಿ, ಅಭಿಪ್ರಾಯ ತಿಳಿಸಿ . . .
February 26th, 2009
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೬ – ಪ್ರತಿಯೊಂದು ರಾತ್ರಿಯೂ ಶುಭ ಮುಂಜಾವಿನ ಪೂರ್ವರಂಗ.
ಅಂತೆಯೇ ಶಿವರಾತ್ರಿಯ ಈ ಪರ್ವವು ಸಹ ಎಷ್ಟೋ ಕಾಲದಿಂದ ಅವ್ಯವಾಗಿದ್ದ ಆತ್ಮಲಿಂಗ ಸ್ವರೂಪಿಯಾದ ಶಿವ ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ’ಹರಹರ ಮಹಾದೇವ’ ಎಂಬ ಘೋಷಣೆಯಲ್ಲಿ ಉಳಿದೆಲ್ಲ ಶಬ್ದಗಳು ಮುಚ್ಚಿ ಹೋದವು ಎಂದು ಶ್ರೀ ರಾಘವೇಶ್ವರಭಾರತೀ ಶ್ರೀಗಳು [...]
February 26th, 2009
ಗೋಕರ್ಣ, ಫೆ.೨೬ – ಮಹಾಶಿವರಾತ್ರಿ ಉತ್ಸವ ವಿಧ್ಯುಕ್ತವಾಗಿ ಮಂಗಲವನ್ನು ಕಂಡಿದೆ. ಗೋಕರ್ಣದ ಮಟ್ಟಿಗೆ ಈ ಒಂಭತ್ತು ದಿನಗಳ ಉತ್ಸವ ಹೊಚ್ಚಹೊಸತು. ಇಲ್ಲಿಯವರೆಗೆ ವಾರ್ಷಿವಾಗಿ ಒಂಭತ್ತು ದಿನಗಳ ಉತ್ಸವ ನಡೆಯುತ್ತಿತ್ತಾದರೂ ಈ ರೀತಿಯ ಸಂಭ್ರಮ ಇರಲಿಲ್ಲ.
February 26th, 2009
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೫ – ಜಗತ್ತಿಗೆ, ಸಮಾಜಕ್ಕೆ ನನ್ನಿಂದ ಒಳಿತಾಗಲಿ ಎಂಬ ಬುದ್ಧಿಯಿಂದ ಮಾಡಿದ ಸ್ವಾರ್ಥ ಲೇಪವಿಲ್ಲದ ಕಾರ್ಯದಿಂದ ಮಾತ್ರ ಪರಮಾತ್ಮನನ್ನು ಹೊಂದಲು ಸಾಧ್ಯ. ಇದೇ ಮಾನವನಲ್ಲಿ ಮಾಧವನನ್ನು ನೋಡುವ ರೀತಿಯೂ ಸಹ ಜಗತ್ತಿನ ಎಲ್ಲ ಕಷ್ಟಕೋಟಲೆಗಳನ್ನು ತಾನು ನುಂಗಿ ಒಳ್ಳೆಯದನ್ನು ಜಗತ್ತಿಗೆ ನೀಡುವ ಸಂಕೇತ ಹಾಲಾಹಲವನ್ನು ಕುಡಿದು ಲೋಕಕ್ಕೆ [...]
February 24th, 2009
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೪ – ಸುಮಾರು ಇಪ್ಪತ್ತು ಸಹಸ್ರ ವರ್ಷಗಳ ಇತಿಹಾಸ ಹೊಂದಿದ ಜಾಗತಿಕ ಸ್ತರದ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಮೂರುಸಾವಿರಕ್ಕೂ ಮೀರಿದ ಭಾಷೆಗಳಿವೆ. ಈ ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿತವಾಗಿರುವುದು ಭಾರತೀಯ ಜೀವನ ಪದ್ಧತಿಯಿಂದ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಹಿಮಾಲಯದವರೆಗೆ ಭಾರತೀಯರು ಬದುಕಿದ ರೀತಿ ಒಂದೇ.
ಇಂತಹ ಮಹತ್ತ್ವಪೂರ್ಣ ಸ್ಥಾನದಲ್ಲಿರುವ ನಮಗೆ ಸಾಮಾಜಿಕ ಜವಾಬ್ದಾರಿಯೂ ಇದ್ದೇಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದ್ದಾರೆ.
February 23rd, 2009
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತಪರ ಮುಂಗಡಪತ್ರ ಮಂಡಿಸಿ, ಕೃಷಿಪರ ಮುಖ್ಯಮಂತ್ರಿ ಎನಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ‘ನಂದಿ’ಯನ್ನು ಪ್ರದಾನ ಮಾಡಲಾಯಿತು.
February 23rd, 2009
ಆತ್ಮಲಿಂಗದ ಅಭಿಷೇಕ ಅರ್ಚನೆಗೆ ಭಕ್ತಾದಿಗಳು ದೊಡ್ಡ ಸಂದಣಿಯಲ್ಲೇ ನೆರೆದಿದ್ದಾರೆ. ಲಕ್ಷ ಲಕ್ಷಗಳಲ್ಲಿ ಎಂದು ಹೇಳಬಹುದೇನೋ.
ಈ ಸಂದಣಿ ನಿನ್ನೆ ರಾತ್ರಿಯಿಂದಲೇ ನೆರೆಯಲು ಶುರುವಾಗಿದೆ. ಶಿವರಾತ್ರಿಯ ಪ್ರಯುಕ್ತ ಆತ್ಮಲಿಂಗಕ್ಕೆ ಮೊದಲ ಅಭಿಷೇಕ ನಿನ್ನೆ ಮಧ್ಯರಾತ್ರಿಯೇ ಪ್ರಾರಂಭವಾಗಿದ್ದು, ಇಂದೂ ಮುಂದುವರೆದಿದೆ.
ರಾತ್ರಿ ಹಗಲುಗಳ ಯಾವುದೇ ಭೇದವಿಲ್ಲದೇ ಬಂದ ಭಕ್ತಸ್ತೋಮ ಮೊದಲು ಕೋಟಿತೀರ್ಥದಲ್ಲಿ ಮಿಂದು ನಂತರ ಸಮುದ್ರಕ್ಕೆ ಮೈಕೊಟ್ಟು ಅನಂತರ ಅಭಿಷೇಕದ ಸರತಿ ಸಾಲಿನಲ್ಲಿ ನಿಲ್ಲಲು ಧಾವಿಸುತ್ತಿದೆ. ಒಂದು ಸಾಲು ಕೋಟಿತೀರ್ಥದ ಕಡೆಯಿಂದ ದೇವಾಲಯವನ್ನು ಪ್ರವೇಶಿಸಿದರೆ, ಮತ್ತೊಂದು ಸಮುದ್ರದ ಕಡೆಯಿಂದ, ಹೀಗೆ ನಾಲ್ಕೂ ದಿಕ್ಕುಗಳಿಂದ [...]
February 22nd, 2009
ಗೋಕರ್ಣ, ಫೆ ೨೨ – ಗೋಕರ್ಣ ಭೋರ್ಗರೆವ ಕಡಲ ತೀರದಲ್ಲಿದೆ. ಈ ಕಡಲಿಗೆದುರಾಗಿಯೇ ಕರುಣೆಯನ್ನೇ ಒಡಲಾಳದಲ್ಲಿ ಕರುಣೆಯನ್ನು ಹೊತ್ತ ಸಾರ್ವಭೌಮ ಮಹಾಬಲನಿದ್ದಾನೆ. ಭಕ್ತರಿಗೆ ಕೈಲಾಸಕ್ಕೆ ಬರುವುದು ಕಷ್ಟವೆಂಬ ಅನುಕಂಪದಿಂದ ಇಲ್ಲಿಗೆ ಬಂದ ಶಿವ. ರಾವಣನು ತನ್ನ ಆತ್ಮಲಿಂಗವನ್ನು ಕಳೆದುಕೊಂಡಂತೆ ಮನುಷ್ಯರೂ ಕಳೆದುಕೊಳ್ಳದಿರಲೆಂದು ಪಾತಾಳದವರೆಗೂ ವ್ಯಾಪಿಸಿ ನಿಂತಿದ್ದಾನೆ. ಈ [...]
February 22nd, 2009
ಗೋಕರ್ಣ – ಮಹಾ ಸಂಕಲ್ಪದಿಂದ ಶಿವರಾತ್ರೆಯವರೆಗಿನ ೬ ತಿಂಗಳವರೆಗಿನ ಅವಧಿಯಲ್ಲಿ ಗೋಕರ್ಣದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ ಎಂದು ಮಾಜಿಶಾಸಕ, ಸಹಕಾರಿ ಧುರೀಣ ಆರ್.ಎಸ್.ಭಾಗ್ವತ್ ಹೇಳಿದರು.ಅರು ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂವತ್ತೈದು ವರ್ಷಗಳಿಂದ ಗಕರ್ಣದ ಸಂಪರ್ಕದಲ್ಲಿದ್ದೇನೆ. ಪುರಾಣ ಪ್ರಸಿದ್ಧವಾದ ಈಕ್ಷೇತ್ರ ತನ್ನ ಮೊದಲಿನ ದಿವತೆ ಕಳೆದುಕೊಂಡು, ಪವಿತ್ರ ಕ್ಷೇತ್ರ ಅಪವಿತ್ರಗೊಂಡು ಮಲಿನವಾಗಿತ್ತು. ಪುಣ್ಯ ಕ್ಷೇತ್ರ ಕಳೆದು ಹೋಗುವ ಅಪಾಯವಿತ್ತು. ಸರ್ಕಾರ ಸಕಾಲದಲ್ಲಿ ಎಚ್ಚೆತ್ತು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿದ್ದರಿಂದ ಕ್ಷೇತ್ರ ಪಾವಿತ್ರ ರಕ್ಷಣೆಯ ಅವಕಾಶ ದೊರೆತಿದೆ ಎಂದರು. [...]