ಪ್ರಕಟಣೆಗಳು

ಗೋಕರ್ಣ ದೇವಾಲಯದ ಅಧಿಕೃತ ಪ್ರಕಟಣೆಗಳು, ಸುದ್ದಿ ಮಾಹಿತಿಗಳು, ಹಾಗೂ ಆಗು ಹೋಗುಗಳ ಒಳನೋಟ ಈ ಅಂಕಣದಲ್ಲಿ ಲಭ್ಯ.


ಗೋಕರ್ಣಶ್ರೀ ೫ನೆಯ ಸಂಚಿಕೆ.


ಅಶೋಕೆಯಲ್ಲಿ ಚಾತುರ್ಮಾಸ್ಯ.


ಗೋಕರ್ಣಶ್ರೀ ನಾಲ್ಕನೆಯ ಸಂಚಿಕೆ.


How to reach Gokarna:

What is Gokarna?
Gokarna is a small and remote holy town, with four of India’s most secluded and pristine beaches nestled nearby. It draws both pious pilgrims and hedonistic holiday makers with equal enthusiasm.The town of Gokarna is about 450 km from Bangalore. The only Shaivaite pilgrimage centre in India with Atmalinga. The Mahabaleshwara Temple in [...]


ಕೋಟಿ ರುದ್ರ “ತೃತೀಯ ಪರ್ವ”

ಭಗವತ್ಪ್ರೀಯರೇ,
                      ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಆತ್ಮಲಿಂಗದ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
“ಕೋಟಿ ರುದ್ರ “ತೃತೀಯ ಪರ್ವ”
ದಿನಾಂಕ 06-09-2009 ನೇ ಶನಿವಾರ ಬೆಳಿಗ್ಗೆ 9 ಘಂಟೆಗೆ ಸಹಸ್ರಾಧಿಕ ಜನರಿಂದ  ರುದ್ರದ ಪರ್ವ ಪೂಜೆ.
ಸಾಯಂಕಾಲ 3-30 ಕ್ಕೆ ಧರ್ಮ ಸಭೆ.       
    :ಸಾನ್ನಿಧ್ಯ:
ಪರಮಪೂಜ್ಯ  ಜಗದ್ಗುರು ಶಂಕರಾಚಾರ್ಯ
ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
 ಶ್ರೀ ರಾಮಚಂದ್ರಾಪುರ ಮಠ.
ಪರಮಪೂಜ್ಯ ತಪೋರತ್ನ ಶ್ರೀ|| ಷ.ಬ್ರ.ರೇವಣಸಿದ್ದ ಶಿವಾಚಾರ್ಯ
ಗುರು ಮಡಿವಾಳ ಶಿವಾಚಾರ್ಯರು ಹನ್ನೆರೆಡು ಮಠ ಕಲಘಟಗಿ.
ಅಂದು ನಮ್ಮೊಂದಿಗೆ:
ಮಾನ್ಯ ಶ್ರೀ ಭೀಮೇಶ್ವರ ಜೋಶಿಯವರು ಮಾನ್ಯ ಧರ್ಮಕರ್ತರು
ಶ್ರೀ ಆದಿಶಕ್ತ್ಯಾತ್ಮಕ [...]


“ಕೋಟಿ ರುದ್ರ ದ್ವಿತೀಯ ಪರ್ವ”

ಆತ್ಮೀಯ ಭಗವತ್ಪ್ರೀಯರೇ,
                                      ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗದ ದಿವ್ಯ ಸಾನ್ನಿಧ್ಯದಲ್ಲಿ ಲೋಕಕಲ್ಯಾಣದ ಸಂಕಲ್ಪದಿಂದ ಆಯೋಜನೆಗೊಂಡು ಮುನ್ನಡೆಯುತ್ತಿರುವ “ಕೋಟಿ ರುದ್ರ ದ್ವಿತೀಯ ಪರ್ವ” ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ದಿನಾಂಕ 11-08-2009 ನೇ ಮಂಗಳವಾರ ಬೆಳಿಗ್ಗೆ 6.22 ರಿಂದ “ಶ್ರೀ ಮಹಾಬಲೇಶ್ವರನಿಗೆ ಯಾಮ ಪೂಜೆ” ಸಮರ್ಪಣೆಯೊಂದಿಗೆ ಜರುಗಲಿದೆ.ಸರ್ವಮಾನ್ಯ ಶ್ರೀ ಭೀಮೇಶ್ವರ ಜೋಶಿ ಮಾನ್ಯ ಧರ್ಮಕರ್ತರು,ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯ,ಶ್ರೀ ಕ್ಷೇತ್ರ ಹೊರನಾಡು ಇವರು ಪೂಜಾ ಪ್ರಾರಂಭದಲ್ಲಿ [...]


“ಕೋಟಿರುದ್ರ”ದಲ್ಲೊಂದು ರುದ್ರಾಧ್ಯಾಯ

‘ರುದ್ರಾಧ್ಯಾಯ’ ಅತಿ ವಿಶಿಷ್ಟವಾದ ಮಂತ್ರಗಳ ಸಂಕಲನ.ರುದ್ರನನ್ನು ಸ್ತುತಿಸುವ ಮಂತ್ರಗಳವು.ವೇದಗಳ ಅನೇಕ ಭಾಗಗಳಲ್ಲಿ ರುದ್ರನಸ್ತುತಿ ಇದೆಯಾದರೂ ಈ  ರುದ್ರಾಧ್ಯಾಯಕ್ಕೆ ತನ್ನದೇ ಆದ ಸ್ಥಾನವಿದೆ.ಇದು ಇರುವುದು ‘ಯಜುರ್ವೇದ ‘ದಲ್ಲಿ.ಯಜುರ್ವೇದದ ತೈತ್ತರೀಯ ಸಂಹಿತೆ,ವಾದಸನೇಯ ಸಂಹಿತೆ,ಕಣ್ವಸಂಹಿತೆ,ಮೈತ್ರಾಯಣೀ ಸಂಹಿತೆ,ಕಾಛಕ ಸಂಹಿತೆ,ಕಪಿಷ್ಠಲ ಸಂಹಿತೆಗಳಲ್ಲಿ  ರುದ್ರಾಧ್ಯಾಯವಿದೆ.ಯಜುರ್ವೇದದಲ್ಲಿ ಒಂದುನೂರು ಶಾಖೆಗಳಿದ್ದವು.ಅವುಗಳಲೆಲ್ಲ ರುದ್ರಾಧ್ಯಾಯವಿತ್ತಂತೆ.ಆದರೆ ಇವುಗಳಲ್ಲಿ ತೈತ್ತರೀಯ ಮತ್ತು  ವಾದಸನೇಯ ರುದ್ರಾಧ್ಯಾಯಗಳು ವೈದಿಕ ಪ್ರಪಂಚದಲ್ಲಿ ಪ್ರಚಲಿತವಾಗಿದೆ.
                                        ರುದ್ರಾಧ್ಯಾಯವನ್ನು ‘ಶತರುದ್ರೀಯ’ ಮತ್ತು ‘ನಮಕ-ಚಮಕ’ಗಳೆನ್ನುವ ಹೆಸರಿನಿಂದಲೂ ಗುರುತಿಸುತ್ತಾರೆ.ಶತ ಎಂದರೆ ಲೆಕ್ಕಕ್ಕೆ ಸಿಗದವನು,ಅನಂತ ಎಂದರ್ಥ.ಅಂತಹ ಅನಂತವಾಗಿರುವ ರುದ್ರನು ಇದರ ದೇವತೆಯಾಗಿರುವುದು ಇದನ್ನು   ಶತರುದ್ರೀಯವೆನ್ನುವಂತೆ ಮಾಡಿದೆ.ರುದ್ರಾಧ್ಯಾಯದಲ್ಲಿ ಎರಡು ಅಧ್ಯಾಯಗಳಿವೆ.ಮೊದಲ ಅಧ್ಯಾಯದಲ್ಲಿ ‘ನಮಃ’ಎಂಬ ಶಬ್ಧ ಬಳಕೆಯಾಗಿದೆ.ಆದ್ದರಿಂದ ಅದು ‘ನಮಕ’.ಎರಡನೇಯ ಅಧ್ಯಾಯದಲ್ಲಿ ‘ಚಮೇ’ ಎನ್ನುವುದು [...]


ಗೋಕರ್ಣವನ್ನು ಜಗತ್ತೇ ನಿರೀಕ್ಷಿಸುವ ಕಾಲ ಬಂದಿದೆ.-ಶ್ರೀ ರಾಘವೇಶ್ವರ ಶ್ರೀಗಳು


“ರಾಘವೇಶ್ವರ ಶ್ರೀಗಳು ದೇವರ ಸಮಾನರು”ಅವರಿಗಾಗಿಯೇ ಗೋಕರ್ಣ ವಹಿಸಿಕೊಡಲಾಗಿದೆ.

ಬೆಂಗಳೂರು:ರಾಮಚಂದ್ರಾಪುರ ಮಠದ ಸ್ವಾಮೀಜಿ ದೇವರ ಸಮಾನರು ಅಲ್ಲಿನ ವ್ಯವಸ್ಥೆ ಸರಿಪಡಿಸಲು ಗೋಕರ್ಣ ದೇವಾಲಯವನ್ನು ಅವರಿಗೆ ವಹಿಸಿಕೊಡಲಾಗಿದೆ.ಈಗ ಅಲ್ಲಿನ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವಸತಿ ಹಾಗು ಮುಜರಾಯಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ನೂತನ ಕೊಠಡಿ ಪ್ರವೇಶ ಮಾಡಿ,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗೋಕರ್ಣ ದೇವಾಲಯಕ್ಕೆ ಸುಮಾರು 20 ಬಾರಿ ಭೇಟಿ ನೀಡಿದ್ದೆ,ಒಮ್ಮೆಯಂತೂ ಅಲ್ಲಿನ ವ್ಯವಸ್ಥೆಯನ್ನು ನೋಡಿ ರಾತ್ರೋರಾತ್ರಿ ವಾಪಸ್ ಬಂದಿದ್ದೆ.ಈಗ ಅಲ್ಲಿಗೆ ಹೋದರೆ ತುಂಬಾ ಸಂತೋಷವಾಗುತ್ತದೆ.ಈ ರೀತಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನುಡಿದರು.


“ಕೋಟಿರುದ್ರ” -ಪ್ರಥಮ ಪರ್ವ-

||ಹರೇರಾಮ||
||ಪಾತು ನಿತ್ಯಂ ಮಹಾಬಲ:||
ಶ್ರೀಸಂಸ್ಥಾನ ಮಹಾಬಲೇಶ್ವರದೇವ,ಗೋಕರ್ಣ
(ಶ್ರೀ ರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಟ್ಟಿದೆ)
ಭಗವತ್ಪ್ರೀಯರೇ,
                       ವಂದನೆಗಳು.
       ಮಹಾಬಲನ ಅನುಗ್ರಹದಿಂದ ಲೋಕಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
 ”ಕೋಟಿರುದ್ರ”
-ಪ್ರಥಮ ಪರ್ವ-
ದಿನಾಂಕ :30/6/2009 ನೇ ಮಂಗಳವಾರ ಸಾಯಂಕಾಲ 5.30ಕ್ಕೆ
ಸಾನ್ನಿಧ್ಯ:
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ|| ಶ್ರೀ|| ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಶ್ರೀರಾಮಚಂದ್ರಾಪುರಮಠ
ಪೂಜ್ಯರ ಸಾನ್ನಿಧ್ಯದಲ್ಲಿ ಅಂದು  ನಮ್ಮೊಂದಿಗೆ
ಸನ್ಮಾನ್ಯ ಶ್ರೀ ದಿನಕರಶೆಟ್ಟಿಯವರು
(ಮಾನ್ಯ ವಿಧಾನಸಭಾಸದಸ್ಯರು,ಕುಮಟಾ)
ಸನ್ಮಾನ್ಯ ಶ್ರೀ ಸಿ.ವಿ.ಎಲ್ ಶಾಸ್ತ್ರಿಯವರು
(ಮಾನ್ಯ ಅಧ್ಯಕ್ಷರು,ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ,ಬೆಂಗಳೂರು.)
ಸನ್ಮಾನ್ಯ ಶ್ರೀ ಗಿರೀಶ್ ಕೃಷ್ಣಮೂರ್ತಿ ,ಬೆಂಗಳೂರು
ಕಸೆಯಾ ಆಟೋಮೇಟಿಂಗ್ ಐಟಿ
(ಮೆನೆಜಿಂಗ್ ಡೈರಕ್ಟರ್-ಇಂಡಿಯಾ)
ಸನ್ಮಾನ್ಯ ಶ್ರೀ ಎಂ.ಎನ್.ಭಟ್.ಮದ್ಗುಣಿ
(ಮಾನ್ಯ ಅಧ್ಯಕ್ಷರು,ಶ್ರೀ [...]