ಪತ್ರಿಕಾ ವರದಿ
ಕ್ಷೇತ್ರಾಧೀಶ ಸಾರ್ವಭೌಮನಿಗೆ ಕನಕಾಭಿಷೇಕ.
ಸಾರ್ವಭೌಮ ಶ್ರೀಮಹಾಬಲೇಶ್ವರ ದೇವರಿಗೆ ಅಮೆರಿಕದ ಶಿಕ್ಯಾಗೋ ನಗರದ ಶ್ರೀ ಅಶ್ವತ್ಥನಾರಾಯಣ ಇವರುದಿನಾಂಕ ೧೫-೦೧-೨೦೧೨ ರವಿವಾರದಂದು ಕನಕಾಭಿಷೇಕ ಮತ್ತು ರಜತಾಭಿಷೇಕ ಸೇವೆಗಳನ್ನು ಸಮರ್ಪಿಸಿದರು.
ದೇವಾಲಯಕ್ಕೆ ಶಾಸಕ ನರೇಂದ್ರಬಾಬು ಭೇಟಿ.
ಶಾಸಕ ಶ್ರೀ ನರೇಂದ್ರ ಬಾಬು ಅವರು ತಮ್ಮ ಕುಟುಂಬದೊಂದಿಗೆ ಶ್ರೀದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವರನ್ನು ಅರ್ಚಿಸಿದರು.ಆಡಳಿತದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ಶಾಸಕರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.ದೇವಾಲಯದ ವತಿಯಿಂದ ಆಯೋಜಿತವಾದ “ಅಮೃತಾನ್ನ” ವ್ಯವಸ್ಥೆಯನ್ನು ಕಂಡು ಶಾಸಕರು ಸಂತುಷ್ಟರಾದರು.ಸ್ಥಳೀಯ ಸಾಮಾಜಿಕ ಧುರೀಣ,ಉದ್ಯಮಿ ಶ್ರೀ ನಾಗರಾಜ ಹಿತ್ತಲಮಕ್ಕಿ ಅವರೂ ಮಾನ್ಯ ಶಾಸಕರ ಜೊತೆ ಉಪಸ್ಥಿತರಿದ್ದರು.