ಮುಖಪುಟ >> ಮಹಾ ಶಿವರಾತ್ರಿ

ಗುರುವಿನ ಮಾರ್ಗದರ್ಶನದಿಂದ ಮಾತ್ರ ಬದುಕಿನಲ್ಲಿ ಉನ್ನತಿ : ಇಬ್ರಾಹಿಂ ಸುತಾರಾ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ಬೆನ್ನ ಹಿಂದೆ ಗುರು, ಮುಂದೆ ಗುರಿ ಇದ್ದರೆ ಮಾತ್ರ ಮನುಷ್ಯ ಈ ಬದುಕಿನ ಔನ್ನತ್ಯವನ್ನೂ, ಸಫಲತೆಯನ್ನೂ ಹೊಂದಲು ಸಾಧ್ಯ. ಗುರು ನಮ್ಮ ಜೀವನದ ಎಲ್ಲ ಕತ್ತಲೆಯನ್ನೂ ದೂರ ಮಾಡಿ ಅರಿವಿನ ಬೆಳಕನ್ನು ನೀಡುತ್ತಾನೆ ಆದ್ದರಿಂದಲೇ ಪುರುಂದರದಾಸರಂತಹ ದಾಸ ಶ್ರೇಷ್ಠರೂ ಸಹ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಹೇಳಿದ್ದಾರೆ ಎಂದು ಗುಲ್ಬರ್ಗದ ಶ್ರೀ ಇಬ್ರಾಹಿಂ ಸುತಾರಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಧ್ಯಾತ್ಮ ಸಂವಾದ ತರಂಗಿಣಿ ನಡೆಸಿಕೊಡುತ್ತಿರುವ ಇಬ್ರಾಹಿಮ್ ಸುತಾರಾ ಮತ್ತು ತಂಡದವರು

ಆಧ್ಯಾತ್ಮ ಸಂವಾದ ತರಂಗಿಣಿ ನಡೆಸಿಕೊಡುತ್ತಿರುವ ಇಬ್ರಾಹಿಮ್ ಸುತಾರಾ ಮತ್ತು ತಂಡದವರು

ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ಏರ್ಪಡಿಸಲಾಗಿರುವ ಒಂಭತ್ತು ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಅಧ್ಯಾತ್ಮ ಸಂವಾದ ತರಂಗಿಣಿಯಲ್ಲಿ ಭಾರತೀಯ ತತ್ತ್ವಜ್ಞಾನ, ಅದ್ವೈತ, ವೇದಾಂತಗಳ ಹಿರಿಮೆ, ಗರಿಮೆಗಳು ನಿಜಗುಣ ಶಿವಯೋಗಿ ಬಸವಣ್ಣ ಇವರ ವಚನಗಳ ಅನುಭಾವ ಪರಂಪರೆಯ ಬಗ್ಗೆ ಮನಮುಟ್ಟುವಂತೆ ತಮ್ಮ ಸಂಗಡಿಗರ ಜೊತೆ ಸಂವಾದ ನಡೆಸಿ, ಶ್ರೋತೃಗಳ ಮನಗೆದ್ದ ಶ್ರೀ ಸುತಾರಾ ಜೀವದಲ್ಲಿದ್ದುಕೊಂಡೇ ಸಂಸಾರಿಗಳಾಗಿಯೇ ಹೇಗೆ ಭಗವಂತನನ್ನು ಕಾಣಲು ಸಾಧ್ಯ ಎಂಬುದನ್ನು ನಿರೂಪಿಸಿದರು. ಮನುಷ್ಯ ಕೇವಲ ಸಂಸಾರ ಮಾತ್ರಕ್ಕೇ ಸೀಮಿತವಾಗದೇ ಪರತತ್ತ್ವದ ಬಗೆಗೂ ಯೋಚಿಸಿ, ಯೋಜಿಸುವುದೂ ಅಗತ್ಯ ಎಂದರು.

---------------------------------------------------------------------------------------------------------------------------------------------------------------------------------------

2 Responses to “ಗುರುವಿನ ಮಾರ್ಗದರ್ಶನದಿಂದ ಮಾತ್ರ ಬದುಕಿನಲ್ಲಿ ಉನ್ನತಿ : ಇಬ್ರಾಹಿಂ ಸುತಾರಾ”

  1. Good work from Ramachandrapura matha team.
    Its good that you have invited a wondeful Muslim knowledgeble person for the purpose, it also serves as neutral candidate, since this was granted under govt instuction.

    Best regards
    Venkatesh Dodmane, USA

    February 19th, 2009 | 9:34 am
  2. ajith

    it was a very nice program i never heard till now like this program

    February 19th, 2009 | 1:31 pm

Leave a Reply