Donate

Help us to help others, please Donate

Related Links

e-Procurement Process 2015

Tender Application Form

Related Links

ಸಾರ್ವಭೌಮ ಸಮ್ಮಾನ ಸ್ವೀಕರಿಸುತ್ತಿರ್ವ ಶ್ರೀ ಮೋಹನ ಆಳ್ವ

ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಅಗತ್ಯ - ಮೋಹನ ಆಳ್ವ

Tuesday, February 24th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೪ - ಸುಮಾರು ಇಪ್ಪತ್ತು ಸಹಸ್ರ ವರ್ಷಗಳ ಇತಿಹಾಸ ಹೊಂದಿದ ಜಾಗತಿಕ ಸ್ತರದ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಮೂರುಸಾವಿರಕ್ಕೂ ಮೀರಿದ ಭಾಷೆಗಳಿವೆ. ಈ ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿತವಾಗಿರುವುದು ಭಾರತೀಯ ಜೀವನ ಪದ್ಧತಿಯಿಂದ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಹಿಮಾಲಯದವರೆಗೆ ಭಾರತೀಯರು ಬದುಕಿದ ರೀತಿ ಒಂದೇ. ಇಂತಹ ಮಹತ್ತ್ವಪೂರ್ಣ ಸ್ಥಾನದಲ್ಲಿರುವ ನಮಗೆ ಸಾಮಾಜಿಕ ಜವಾಬ್ದಾರಿಯೂ ಇದ್ದೇ‌ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದ್ದಾರೆ.

ಮುಖ್ಯ ಮಂತ್ರಿಗಳಿಗೆ ನಂದಿಯ ಅನುಗ್ರಹ

ಮುಖ್ಯಮಂತ್ರಿಗಳಿಗೆ ನಂದಿಯ ಅನುಗ್ರಹ

Monday, February 23rd, 2009

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತಪರ ಮುಂಗಡಪತ್ರ ಮಂಡಿಸಿ, ಕೃಷಿಪರ ಮುಖ್ಯಮಂತ್ರಿ ಎನಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ‘ನಂದಿ’ಯನ್ನು ಪ್ರದಾನ ಮಾಡಲಾಯಿತು. ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಅನುಗ್ರಹ ರೂಪವಾಗಿ ನಂದಿಯನ್ನು ನೀಡಿ, ನಾಡಿನ ಸುಖ-ಸಮೃದ್ಧಿ ಇನ್ನೂ ಹೆಚ್ಚಿನ ರೀತಿಯಲ್ಲಿ ವೃದ್ಧಿಸಲಿ ಎಂದು ಹಾರೈಸಿದರು. ಭಕ್ತಿಭಾವದಿಂದ ಭಾವುಕರಾದ ಮುಖ್ಯಮಂತ್ರಿಯವರು ನಂದಿಯ ಶಿರಕ್ಕೆ ತಲಬಾಗಿ ವಂದಿಸಿ, ಶ್ರೀಮಠ ನೀಡಿದ ಅಪೂರ್ವ ಕೊಡುಗೆಯನ್ನು ಆತ್ಮೀಯವಾಗಿ ಸ್ವೀಕರಿಸಿದರು.

ಎಲ್ಲೆಲ್ಲೂ ಜನವೋ ಜನ

ಎಲ್ಲೆಲ್ಲೂ ಜನವೋ ಜನ

Monday, February 23rd, 2009

ಆತ್ಮಲಿಂಗದ ಅಭಿಷೇಕ ಅರ್ಚನೆಗೆ ಭಕ್ತಾದಿಗಳು ದೊಡ್ಡ ಸಂದಣಿಯಲ್ಲೇ ನೆರೆದಿದ್ದಾರೆ. ಲಕ್ಷ ಲಕ್ಷಗಳಲ್ಲಿ ಎಂದು ಹೇಳಬಹುದೇನೋ. ಈ ಸಂದಣಿ ನಿನ್ನೆ ರಾತ್ರಿಯಿಂದಲೇ ನೆರೆಯಲು ಶುರುವಾಗಿದೆ. ಶಿವರಾತ್ರಿಯ ಪ್ರಯುಕ್ತ ಆತ್ಮಲಿಂಗಕ್ಕೆ ಮೊದಲ ಅಭಿಷೇಕ ನಿನ್ನೆ ಮಧ್ಯರಾತ್ರಿಯೇ ಪ್ರಾರಂಭವಾಗಿದ್ದು, ಇಂದೂ ಮುಂದುವರೆದಿದೆ. ರಾತ್ರಿ ಹಗಲುಗಳ ಯಾವುದೇ ಭೇದವಿಲ್ಲದೇ ಬಂದ ಭಕ್ತಸ್ತೋಮ ಮೊದಲು ಕೋಟಿತೀರ್ಥದಲ್ಲಿ ಮಿಂದು ನಂತರ ಸಮುದ್ರಕ್ಕೆ ಮೈಕೊಟ್ಟು ಅನಂತರ ಅಭಿಷೇಕದ ಸರತಿ ಸಾಲಿನಲ್ಲಿ ನಿಲ್ಲಲು ಧಾವಿಸುತ್ತಿದೆ. ಒಂದು ಸಾಲು ಕೋಟಿತೀರ್ಥದ ಕಡೆಯಿಂದ ದೇವಾಲಯವನ್ನು ಪ್ರವೇಶಿಸಿದರೆ, ಮತ್ತೊಂದು ಸಮುದ್ರದ ಕಡೆಯಿಂದ, ಹೀಗೆ […]

ಧರ್ಮಸಭೆಯ ಉದ್ಘಾಟನೆಯ ಸುಸಮಯ

ದೇವಾಲಯ ನಿರ್ವಾಹಕರು ಗೋಡೆಯಾಗದೆ ದ್ವಾರಗಳಾಗಬೇಕು - ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀ

Sunday, February 22nd, 2009

ಗೋಕರ್ಣ, ಫೆ ೨೨ - ಗೋಕರ್ಣ ಭೋರ್ಗರೆವ ಕಡಲ ತೀರದಲ್ಲಿದೆ. ಈ ಕಡಲಿಗೆದುರಾಗಿಯೇ ಕರುಣೆಯನ್ನೇ ಒಡಲಾಳದಲ್ಲಿ ಕರುಣೆಯನ್ನು ಹೊತ್ತ ಸಾರ್ವಭೌಮ ಮಹಾಬಲನಿದ್ದಾನೆ. ಭಕ್ತರಿಗೆ ಕೈಲಾಸಕ್ಕೆ ಬರುವುದು ಕಷ್ಟವೆಂಬ ಅನುಕಂಪದಿಂದ ಇಲ್ಲಿಗೆ ಬಂದ ಶಿವ. ರಾವಣನು ತನ್ನ ಆತ್ಮಲಿಂಗವನ್ನು ಕಳೆದುಕೊಂಡಂತೆ ಮನುಷ್ಯರೂ ಕಳೆದುಕೊಳ್ಳದಿರಲೆಂದು ಪಾತಾಳದವರೆಗೂ ವ್ಯಾಪಿಸಿ ನಿಂತಿದ್ದಾನೆ. ಈ ದೇವಾಲಯದ ನಿರ್ವಹಣೆ ಬಹಳಕಾಲದ ನಂತರ ನಮಗೆ ಸಿಕ್ಕಿದೆ. ನಾವು ಭಕ್ತ-ದೇವರ ಮಧ್ಯೆ ಗೋಡೆಯಾಗದೆ ದ್ವಾರವಾಗುತ್ತೇವೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ನುಡಿದರು. ಸಾಗರ ಸಂಗಮದ […]

ಗೋಕರ್ಣದಲ್ಲಿ ಬದಲಾವಣೆ ಕಂಡಿದೆ - ಆರ್.ಎಸ್. ಭಾಗವತ್

Sunday, February 22nd, 2009

ಗೋಕರ್ಣ - ಮಹಾ ಸಂಕಲ್ಪದಿಂದ ಶಿವರಾತ್ರೆಯವರೆಗಿನ ೬ ತಿಂಗಳವರೆಗಿನ ಅವಧಿಯಲ್ಲಿ ಗೋಕರ್ಣದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ ಎಂದು ಮಾಜಿಶಾಸಕ, ಸಹಕಾರಿ ಧುರೀಣ ಆರ್.ಎಸ್.ಭಾಗ್ವತ್ ಹೇಳಿದರು.ಅರು ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂವತ್ತೈದು ವರ್ಷಗಳಿಂದ ಗಕರ್ಣದ ಸಂಪರ್ಕದಲ್ಲಿದ್ದೇನೆ. ಪುರಾಣ ಪ್ರಸಿದ್ಧವಾದ ಈಕ್ಷೇತ್ರ ತನ್ನ ಮೊದಲಿನ ದಿವತೆ ಕಳೆದುಕೊಂಡು, ಪವಿತ್ರ ಕ್ಷೇತ್ರ ಅಪವಿತ್ರಗೊಂಡು ಮಲಿನವಾಗಿತ್ತು. ಪುಣ್ಯ ಕ್ಷೇತ್ರ ಕಳೆದು ಹೋಗುವ ಅಪಾಯವಿತ್ತು. ಸರ್ಕಾರ ಸಕಾಲದಲ್ಲಿ ಎಚ್ಚೆತ್ತು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿದ್ದರಿಂದ ಕ್ಷೇತ್ರ ಪಾವಿತ್ರ ರಕ್ಷಣೆಯ ಅವಕಾಶ ದೊರೆತಿದೆ ಎಂದರು. […]

ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ವಿದೇಶಿಯರಿಂದ ಕಾರ್ಯಕ್ರಮ

ವಿದೇಶಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:ಚಿತ್ರಪುಟದಲ್ಲಿ

Sunday, February 22nd, 2009

ಗೋ್ರ್ಣ,ೆಬ್ರವರಿ ೨೦೦೯: ಶಿವರತ್ರಿ ಪ್ರಯುಕ್ತ ವಿದೇಶಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಚಿತ್ರಪುಟದಲ್ಲಿ

Musical concert by foreigners

Gallery updated (21 feb.2009): cultural programmes

Sunday, February 22nd, 2009

Gokarna,21 february 2009: Latest photos of the cultural programmes of Shivaratri Festival,Gokarna are updated in the website gallery.

ಗೋಕರ್ಣ ಕನಡ ಸಾಹಿತ್ಯ ಪರಿಷತ್ತಿನ ಉದ್ಘಾಟನೆ

ಭಾವ ಸಂವೇದನೆ ವ್ಯಕ್ತಿಯ ನೈಜ ರೂಪ : ಶ್ರೀ ರಾಘವೇಶ್ವರ ಶ್ರೀ

Saturday, February 21st, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಮನುಷ್ಯ ಎಲ್ಲ ರೀತಿಯಿಂದಲೂ ಬೆಳೆಯಬೇಕು. ಸಾಹಿತ್ಯದಿಂದ ಹೃದಯ ಅರಳುತ್ತದೆ. ಬದುಕಿಗೆ ಅಗತ್ಯವಾದ ಭಾವ ಸಾಹಿತ್ಯದ ಕೊಡುಗೆ. ಭಾವ ಸಂವೇದನೆಯೇ ವ್ಯಕ್ತಿಯ ನೈಜ ರೂಪ ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಇಂದಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೋಕರ್ಣ ಘಟಕವನ್ನು ಶುಭಾರಂಭಗೊಳಿಸಿ ಮಾತನಾಡಿದ ಅವರು ಈ ಘಟಕದಿಂದ ಸಮಾಜೋಪಯೋಗಿಯಾದ ಸಾಹಿತ್ಯ ಕಾರ್ಯಗಳು ನಿರಂತರವಾಗಿ ಆಯೋಜಿತವಾಗಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಾಹಿತಿ, ವಿಚಾರವಾದಿ ಬಿ.ಎ. ಸನದಿ ಕನ್ನಡ ಸಾಹಿತ್ಯ ಹಲವಾರು ಖ್ಯಾತ ಕವಿಗಳ ಕೊಡುಗೆಯಿಂದ […]

ದಿ.ಗೌರೀಶ ಕಾಯ್ಕಿಣಿ ಅವರಿಗೆ ಸಾರ್ವಭೌಮ ಸಮ್ಮಾನ ಪುರಸ್ಕಾರ

ಬದುಕಿನ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ : ಜಯಂತ ಕಾಯ್ಕಿಣಿ

Saturday, February 21st, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಸಹಜವಾದ ತಾಯ್ತನದ ತುಡಿತ, ಹಸುಗೂಸಿನ ಬೆರಗು, ಎರಡನ್ನೂ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹಣವೇ ಮುಖ್ಯ ಮೂಲ್ಯವಾಗಿ ನಮ್ಮ ಸಂಸ್ಕೃತಿಯ ಮಮತೆ, ಸಮತೆಯ ಬಂಧ ಸಡಿಲವಾಗಿದೆ. ಹಣದ ಹಿಂದೆ ಧಾವಿಸುವ ನಮ್ಮ ಪ್ರವೃತ್ತಿಯಿಂದಾಗಿ ಜೀವನದ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ. ಇಂದು ಸಾಗರ ಸಂಗಮದ ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮ ಸಭೆಯಲ್ಲಿ ನಾಡಿನ ಖ್ಯಾತ ಚಿಂತಕ, […]

ದಿ.ಶ್ರೀ ಗೌರೀಶ್ ಕಾಯ್ಕಿಣಿ ಅವರಿಗೆ ಸಾರ್ವಭೌಮ ಪ್ರಶಸ್ತಿ ಪ್ರದಾನ

ಹೊಸತು : ಧರ್ಮ ಸಭೆ ಮತ್ತು ಸಾರ್ವಭೌಮ ಸಮ್ಮಾನ : ಚಿತ್ರಪುಟದಲ್ಲಿ : ಫೆಬ್ರವರಿ ೨೧, ೨೦೦೯

Saturday, February 21st, 2009

ಗೋಕರ್ಣ :ಫೆಬ್ರವರಿ ೨೧ : ಇಂದು ನಡೆದ ಧರ್ಮ ಸಭೆ ಹಾಗೂ ಸಾರ್ವಭೌಮ ಸಮ್ಮಾನ ದ ಚಿತ್ರಗಳು ಚಿತ್ರಪುಟದಲ್ಲಿ ಲಭ್ಯ. (ಕಾರ್ಯಕ್ರಮ ದ ಇನ್ನಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ )

Highslide for Wordpress Plugin