Gallery updated (21-Feb-2009): Dharma Sabha at Gokarna
Saturday, February 21st, 2009Gokarna, Feb 21: : Today’s Dharmasabha and Sarvabhouma Sammana photos have been updated at our photo gallery. (Click here to view the Gallery)


Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
Gokarna, Feb 21: : Today’s Dharmasabha and Sarvabhouma Sammana photos have been updated at our photo gallery. (Click here to view the Gallery)
ನಂದಿಶ್ವರ ವೇದಿಕೆ, ಗೋಕರ್ಣ, ಫೆ.೨೦ - ನಮ್ಮೆಲ್ಲರ ಬದುಕಿಗೆ ಅತ್ಯಂತ ಅಗತ್ಯವಾದದ್ದು ಎರಡೇ, ಆರೋಗ್ಯ ಮತ್ತು ನೆಮ್ಮದಿ. ಒಂದು ಶಾರೀರಿಕ, ಮತ್ತೊಂದು ಆಧ್ಯಾತ್ಮಿಕ. ಆರೋಗ್ಯ ಬಹಿರಂಗದ ಅಗತ್ಯವಾದರೆ, ನೆಮ್ಮದಿ ಅಂತರಂಗಕ್ಕೆ ಅಪೇಕ್ಷಿತ. ಇಂದಿನ ಧಾವಂತದ ಯುಗದಲ್ಲಿ ಬದುಕಿನ ಮೌಲ್ಯಗಳಾದ ಇವೆರಡನ್ನು ಬಿಟ್ಟು ಬೇಡವಾದವುಗಳ ಬೆನ್ನು ಹತ್ತಿ ಹೋಗುತ್ತಿದ್ದೇವೆ. ಅಷ್ಟೇ ಅಲ್ಲ ಹಣಕ್ಕಾಗಿ ಶರೀರ ಮನಸ್ಸುಗಳೆರಡರ ಸ್ಥಿತಿಯನ್ನೂ ಕೆಡಿಸಿಕೊಳ್ಳುತ್ತಿದ್ದೇವೆ. ಆಮೇಲೆ ಇದನ್ನು ಪಡೆಯಲು ಹಣ ಖರ್ಚು ಮಾಡುತ್ತೇವೆ. ಬದುಕಿಗೆ ಹಣದ ಅಗತ್ಯವಿದೆ. ಹಾಗೆಂದು ಹಣವೇ ಸರ್ವಸ್ವವಲ್ಲ. ನೆಮ್ಮದಿಯ ಭಾವ, […]
Gokarna, Feb 20 : Today’s Dharmasabha and Sarvabhouma Sammana photos have been updated at our photo gallery. (Click here to view the gallery)
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ : ಗೋಕರ್ಣ ಕ್ಷೇತ್ರದಲ್ಲಿ ಈ ವರ್ಷ ಎಲ್ಲವೂ ಹೊಸತು. ಶಿವರಾತ್ರಿಯ ಸಡಗರ, ಸಾಂಸ್ಕೃತಿಕ ಸೌರಭ, ಲಕ್ಷ ಲಕ್ಷ ಮಂದಿ ಯಾತ್ರಿಕ ಭಕ್ತರ ಹೊಟ್ಟೆಯನ್ನು ತಂಪಾಗಿಸುವ ಅಮೃತಾನ್ನ, ಧಾರ್ಮಿಕ ಪ್ರಕಲ್ಪಗಳು, ಈ ಎಲ್ಲ ಹೊಸತುಗಳ ಮೂಲಕ ಕ್ರಾಂತಿಕಾರಿ ಪರಿವರ್ತನೆಯೊಂದಿಗೆ ಶ್ರೀ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಗೊಂಡಿದೆ.
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ - ಸ್ವಾಮಿ ವಿವೇಕಾನಂದರು ಹೇಳಿದಂತೆ ಜಗತ್ತಿಗೆ ಭಾರತದ ಮುಖ್ಯ ಕೊಡುಗೆ ತ್ಯಾಗ ಮತ್ತು ಸೇವೆ. ಈ ಎರಡೂ ಗುಣಗಳೂ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಭಗವಂತ ಉದಾರ ಹೃದಯನಾಗಿ ನಮಗೆ ನೀಡಿದ ಕೊಡುಗೆಯಾದ ನಿಸರ್ಗ ಇಂದು ತೀರ ಕಲುಷಿತವಾಗುತ್ತಿದೆ. ಕೇವಲ ಸ್ವಾರ್ಥಕ್ಕಾಗಿ ಇನ್ನೆಂದೂ ಪುನಃ ಸರಿಪಡಿಸಲಾರದಂತಹ ದೋಷಗಳೂ ನಡೆಯುತ್ತವೆ. ಇಂತಹ ತಪ್ಪುಗಳನ್ನು ಸೇವಾಭಾವನೆಯ ಮೂಲಕ ಮಾತ್ರ ದೂರಮಾಡಬಹುದು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಗೋಕರ್ಣದಲ್ಲಿ ನಡೆಯುತ್ತಿರುವ ಉ.ಕ. ಜಿಲ್ಲಾ ರಾಷ್ಟ್ರೀಯ ಸೇವಾ […]
ಗೋಕರ್ಣ, ಫೆ.೧೯ - ಗೋಕರ್ಣದಲ್ಲಿ ಒಂದು ಕಡೆ ಮಹಾಶಿವರಾತ್ರಿ ಮಹೋತ್ಸವದ ಸಂಭ್ರಮವಾದರೆ ಮತ್ತೊಂದೆಡೆ ಚಿಕೂನ್ ಗುನ್ಯಾ ಪೀಡಿತರಿಗಾಗಿ ಉಚಿತ ಗವ್ಯ ಚಿಕಿತ್ಸೆಯನ್ನು ಆಯೋಜಿಸಲಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಕೂನ್ ಗುನ್ಯಾದ ಸಮಸ್ಯೆ ಉಲ್ಬಣಗೊಂಡಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಶ್ರೀರಾಮಚಂದ್ರಾಪುರಮಠ ಗವ್ಯ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ತಪಾಸಣೆ, ಚಿಕಿತ್ಸೆಗಳೆರಡನ್ನೂ ಉಚಿತವಾಗಿ ನೀಡಲಾಗುತ್ತದೆ. ಚಿಕಿತ್ಸೆಗೆ ಗೋ ಆಧಾರಿತ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳ ಭಯವಿರುವುದಿಲ್ಲ. ಈ ಹಿಂದೆ ೨೦೦೮ರ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ಮಾದರಿಯ ಚಿಕಿತ್ಸೆಯನ್ನು ದಕ್ಷಿಣ ಕನ್ನಡ, ಕಾಸರಗೋಡು, […]
Gokarna, Feb 19 : Today’s Dharmasabha and Sarvabhouma Sammana photos have been updated at our photo gallery. (Click here to view todays photo gallery)
ಗೋಕರ್ಣ :ಫೆಬ್ರವರಿ ೧೯ : ಇಂದು ನಡೆದ ಧರ್ಮ ಸಭೆ ಹಾಗೂ ಸಾರ್ವಭೌಮ ಸಮ್ಮಾನ ದ ಚಿತ್ರಗಳು ಚಿತ್ರಪುಟದಲ್ಲಿ ಲಭ್ಯ. (ಕಾರ್ಯಕ್ರಮ ದ ಇನ್ನಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ )
Gokarna, Feb 18: His Holiness Sri Sri Raghaveshwara Bharati Swamiji was offered with the Tulabharam Seva at Gokarna today, on the ocassion of Shivaratri. (Click here to view more photos of Tulabharam)
ಗೋಕರ್ಣ: ಫೆ ೧೮ - ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳವರಿಗೆ ಶಿವರಾತ್ರಿ ಆಚರಣೆಯ ಶುಭಾವಸರದಲ್ಲಿ ತುಲಾಭಾರ ಸೇವೆ ನಡೆಯಿತು. (ತುಲಾಭಾರದ ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ)