

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ.
ಮಹಾರಾಷ್ಟ್ರದ ರಾಜ್ಯಪ್ರಶಸ್ತಿ ಪುರಸ್ಕೃತರೂ ಖ್ಯಾತ ಸಮಾಜ ಸುಧಾರಕರೂ ಆದ ಶ್ರೀ ದತ್ತಾತ್ರೇಯ ನಾರಾಯಣ ಧರ್ಮಾಧಿಕಾರಿ
ಇವರು ಕಳೆದ ೨೨ರಂದು ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದ್ದರು. ಕುಟುಂಬ ಸಮೇತ ಶ್ರೀ ಸಾರ್ವಭೌಮ ಆತ್ಮಲಿಂಗಕ್ಕೆ ಅಭಿಷೇಕ
ಪೂಜೆ ನೆರವೇರಿಸಿದ ಅವರು ಶ್ರೀದೇವಾಲಯದ ವತಿಯಿಂದ ನಡೆಯುತ್ತಿರುವ ವಿವಿಧ ಧಾರ್ಮಿಕಕಾರ್ಯಗಳು ಹಾಗೂ ಶ್ರೀಕ್ಷೇತ್ರದ
ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆಗಳನ್ನು ಕೇಳಿ ತಿಳಿದು ಈ ಕುರಿತಾಗಿ ತಮ್ಮ ಹಾರ್ದಿಕಸಂತೋಷವನ್ನು ವ್ಯಕ್ತಪಡಿಸಿದರು
ಶ್ರೀ ದೇವಾಲಯದ ವತಿಯಿಂದ ಜಿ.ಕೆ. ಹೆಗಡೆ ಶ್ರೀಯುತರನ್ನು ಶಾಲು ಹೊದೆಸಿ ಸನ್ಮಾನಿಸಿದರು.