

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀಮಹಾಬಲೇಶ್ವರ ದೇವಾಲಯಕ್ಕೆ ನೌಸೇನಾ ಅಧಿಕಾರಿಗಳ ಭೇಟಿ.
ಗೋಕರ್ಣ.ಭಾರತೀಯ ನೌಕಾಸೇನೆಯ ಅಡ್ಮಿರಲ್ ಅತುಲ್ ಜೈನ್ ಅವರು ೬ ಶುಕ್ರವಾರದಂದು ತಮ್ಮಕುಟುಂಬದೊಂದಿಗೆ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ
ಸಾರ್ವಭೌಮ ಶ್ರೀಮಹಾಬಲೇಶ್ವರನನ್ನು ಅರ್ಚಿಸಿದರು.ಹಾಗೂ ಶ್ರೀದೇವಾಲಯದ ಆಡಳಿತ,ಪೂಜಾವ್ಯವಸ್ಥೆಗಳ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದರು.
ದೇವಾಲಯದ ಆಡಳಿತದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ಶ್ರೀ ಜೈನ್ ಅವರನ್ನು ಸ್ವಾಗತಿಸಿ ಪೂಜಾಕೈಂಕರ್ಯವನ್ನು ನೆರವೇರಿಸಲು ಸಹಕರಿಸಿದರಲ್ಲದೆ
ದೇವಾಲಯದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.