

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ‘ಪ್ರತಿಷ್ಠಾ ದಿನೋತ್ಸವ’ದ ಪ್ರಯುಕ್ತ (20-10-2017 ಶುಕ್ರವಾರ ) ಶ್ರೀ ದೇವರಿಗೆ ವಿಶೇಷ ಪೂಜೆ ನೆರವೇರಿತು . ಸಾಯಂಕಾಲ ಶ್ರೀ ದೇವರ ಉತ್ಸವವು ಶ್ರೀ ವೆಂಕಟರಮಣ ದೇವಾಲಯದವರೆಗೆ ತೆರಳಿ ಆರತಿ ಸ್ವೀಕರಿಸುತ್ತ ಬಂದಿತು . ಆ ನಂತರದಲ್ಲಿ ಊರಿನ ಭಕ್ತಾದಿಗಳು ಶ್ರೀ ದೇವರಿಗೆ ಫಲ ಸಮರ್ಪಿಸಿದರು .
ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಶ್ರೀರಾಮಚಂದ್ರಾಪುರಮಠದ ಪರವಾಗಿ - ಶ್ರೀ ಜಿ ಕೆ ಹೆಗಡೆ, ವೇ ರಾಮಕೃಷ್ಣ ಭಟ್ ಶಂಕರಲಿಂಗ, ವೇ ವರದೇಶ್ವರ ಹಿರೇಗಂಗೆ , ವೇ ಲಕ್ಷ್ಮೀನಾರಾಯಣ ಜಂಭೆ ಇವರು ಗಳು ಶ್ರೀದೇವರಿಗೆ ಫಲ ಸಮರ್ಪಿಸಿದರು .