

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಯ ಪ್ರಥಮ ಮಹಾದ್ವಾರವನ್ನು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ರಜತಮಯವನ್ನಾಗಿಸಲಾಗಿದೆ. ಶಿಲಾಮಯ ರಚನೆಗೆ ಹಿತ್ತಾಳೆಯ ಎರಕ ನಿರ್ಮಿಸಿ ಅದರ ಮೇಲೆ ಬೆಳ್ಳಿಯ ರಚನೆ ನಿರ್ಮಿಸಲಾಗಿದೆ. ಬಲು ಅಪರೂಪವಾದ ಇಂತಹ ಕಲಾಕೃತಿಯನ್ನು ಪುತ್ತೂರಿನ ಮುಳಿಯ ಜ್ಯುವೆಲ್ಸ್ ನವರು ನಿರ್ಮಿಸಿದ್ದಾರೆ. ಈ ರಜತ ಮಹಾದ್ವಾರವು ಪರಮಪೂಜ್ಯರಿಂದ ಶಿವರಾತ್ರಿ ಮಹೋತ್ಸವದ ಪುಣ್ಯ ಪರ್ವಕಾಲದಲ್ಲಿ ಉದ್ಘಾಟನೆಗೊಂಡಿತು. ಪರಮಪೂಜ್ಯರ ಆಶಯದಂತೆ ಮರದ ಬದಲು ಹಿತ್ತಾಳೆಯ ಆವರಣ ನಿರ್ಮಿಸಿ ಅದರ ಮೇಲೆ ಬೆಳ್ಳಿಯ ಮಹಾದ್ವಾರ ನಿರ್ಮಿಸಲಾಗಿದ್ದು ಶೋಭಾಯಮಾನವಾಗಿದೆ . ಈ ರಜತ ರಚನೆಯು ದೇವಾಲಯದ ಮಹಾದ್ವಾರಕ್ಕೆ ಶೋಭೆಯನ್ನು ಮತ್ತು ಭಕ್ತರಿಗೆ ಹಿತಾನುಭವ ನೀಡುತ್ತಿದೆ .
ಮಾರ್ಚ 19th, 2015 at 1:47 pm
I am very proud of being borne in a village close proximity to Sri Kshetra Gokarna. After the temple come under the fold of Sri Raghaveshwara Bharati Swamigal of Sri Raamchandrapur Mutt, the temple has improved in all respect and the devotees feeling happy of seeing the God Mahabaleshwara in a very holy atmosphere.