

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಮಾಜಿ ಮುಖ್ಯಮಂತ್ರಿ, ಜಾತ್ಯತೀತ ಜನತಾದಳ ಅಧ್ಯಕ್ಷ ಶ್ರೀ ಹೆಚ್ ಡಿ ಕುಮಾರಸ್ವಾಮಿ ಇವರು ಭೇಟಿ ನೀಡಿ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಶಿತಿಕಂಠ ಹಿರೇಭಟ್ ನೇತೃತ್ವದಲ್ಲಿ ಉಪಾಧಿವಂತ ಮಂಡಳಿಯ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ಮರಣಿಕೆ ನೀಡಿ , ಶಾಲು ಹೊದೆಸಿದರು. ಶ್ರೀ ಪ್ರದೀಪ ನಾಯಕ ದೇವರಭಾವಿ , ಇತರರು ಹಾಜರಿದ್ದರು . ಇದಕ್ಕೂ ಮೊದಲು ಶ್ರೀಯುತರು ಶ್ರೀರಾಮಚಂದ್ರಾಪುರಮಠ - ಅಶೋಕೆಯಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು .