ಗೋಕರ್ಣದ ಬಗ್ಗೆ . .
ಬುಧವಾರ, ಏಪ್ರಿಲ್ 17th, 2013’ಗೋಕರ್ಣ’ ಭಾರತೀಯರೆಲ್ಲರಿಗೆ ಅತ್ಯಂತ ಪವಿತ್ರವಾದ ತ್ರಿಸ್ಥಳಗಳಲ್ಲಿ ಒಂದು. ಅಂತೆಯೇ ಭರತಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿಯೂ ಒಂದು. ಜಗದಾಧಾರನಾದ ಪರಶಿವನು ಇಲ್ಲಿ ಆತ್ಮಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೋರ್ಗರೆವ ಪಶ್ಚಿಮ ಸಮುದ್ರದ ತಡಿಯಲ್ಲಿ ಸಾಗರಾಭಿಮುಖನಾಗಿ ಸ್ಥಾಪಿತನಾದ ಈ ಕೃಪಾಸಾಗರ ಸಾರ್ವಭೌಮ ಮಹಾಬಲನೆಂದೇ ಖ್ಯಾತ. ತ್ರಿಲೋಕವಿಜಯಿಯಾದ ರಾವಣನ ಬಲವನ್ನು ಅಪಹರಿಸಿ ಅಸುರೀಶಕ್ತಿಯನ್ನು ಮೆಟ್ಟಿನಿಂತ ಈ ಕ್ಷೇತ್ರ ಶಿವಶಕ್ತಿಯು ಅತ್ಯಂತ ಜಾಗೃತ ಸ್ಥಿತಿಯಲ್ಲಿರುವ ವಿರಳಸ್ಥಳಗಳಲ್ಲಿ ಒಂದು. ಜಾತಿ – ಮತಗಳ ಭೆದವಿಲ್ಲದೆ ಎಲ್ಲ ಭಾವುಕಭಕ್ತರಿಗೆ ಶುಭಂಕರನಾದ ಶಿವನನ್ನು ಸ್ಪರ್ಶಿಸಿ ಅರ್ಚಿಸಲು ಅವಕಾಶವಿರುವ ದಕ್ಷಿಣಕಾಶಿ. ಗೌರಿ, […]










