Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವರಾತ್ರಿ ಮಹೋತ್ಸವ ಸಂಪನ್ನ

ರವಿವಾರ, ಮಾರ್ಚ 10th, 2019

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ, ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಲಂಬಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಮಂಗಲವಾಯಿತು . ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವ ದ ಅಂಗವಾಗಿ ದಿನಾಂಕ 07-03-2019 ರಂದು “ಮಹಾರಥೋತ್ಸವ” ಸಂಪನ್ನಗೊಂಡಿತು . ಸ್ಥಳೀಯ ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಭಕ್ತರು ‘ಹರ ಹರ ಮಹಾದೇವ’ ಎಂಬ ಘೋಷದೊಂದಿಗೆ […]

ಶಿವರಾತ್ರಿ ಮಹೋತ್ಸವದ ಧರ್ಮಸಭೆ- “ಸಾರ್ವಭೌಮ” ಪ್ರಶಸ್ತಿ ಘೋಷಣೆ

ರವಿವಾರ, ಮಾರ್ಚ 10th, 2019

* ಶಿವರಾತ್ರಿ ಮಹೋತ್ಸವದ ಧರ್ಮಸಭೆ * ಅಂತಾರಾಷ್ಟ್ರೀಯ ಕ್ಯಾನ್ಸರ್ ವಿಜ್ಞಾನಿಗೆ “ಸಾರ್ವಭೌಮ” ಪ್ರಶಸ್ತಿ ಗೋಕರ್ಣದ ಮಹಾಬಲೇಶ್ವರ ದೇವಾಲಯ ಮಠಕ್ಕೆ ಆದಾಯದ ಮೂಲವಲ್ಲ. ಅದು ಸೇವೆಯ ಸಾಧನ ಮಾತ್ರ. ಗೋಕರ್ಣ ದೇವಾಲಯದಿಂದ ಒಂದು ರೂಪಾಯಿಯನ್ನು ಮಠ ತೆಗೆದುಕೊಂಡಿಲ್ಲ, ಕೋಟ್ಯಾಂತರ ರೂಪಾಯಿಗಳನ್ನು ಮಠ ದೇವಾಲಯದ ಅಭಿವೃದ್ಧಿಗೆ ಬಳಸಿದೆ. ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ, ನಮ್ಮಿಂದಲೇ ಒಳ್ಳೆಯದಾಗ ಬೇಕು ಎಂಬ ಸ್ವಾರ್ಥ ನಮಗಿಲ್ಲ. ಆದರೆ ಮಠದಿಂದಲೇ ಮಹಾಬಲೇಶ್ವರನ ಸೇವೆ ನಡೆಯಲಿ ಎಂಬುದು ಮಹಾಬಲನ ಇಚ್ಛೆ. ಮಹಾಬಲನೇ ಸೇವೆಯ ಅವಕಾಶವನ್ನು ನೀಡಿರುವಾಗ ಶಿರಸಾವಹಿಸಿ […]

ಶಿವಯೋಗ - ವಿಶೇಷ ಪೂಜೆ

ಬುಧವಾರ, ಮಾರ್ಚ 6th, 2019

ಭೂಕೈಲಾಸ-ಆತ್ಮಲಿಂಗದ ದಿವ್ಯ ಸನ್ನಿಧಿ- ಶ್ರೀಕ್ಷೇತ್ರ ಗೋಕರ್ಣದಲ್ಲಿ- #ಶಿವರಾತ್ರಿ ದಿನದ ಪುಣ್ಯ ಕಾಲದಲ್ಲಿ ಶ್ರೀ ಮಹಾಬಲೇಶ್ವರ ದೇವರ ದರ್ಶನಕ್ಕೆ ಜನಸಾಗರ ಸೇರಿತ್ತು . ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ , ಉಪಾಧಿವಂತ ಮಂಡಲದ ವತಿಯಿಂದ ವಿವಿಧ ಧಾರ್ಮಿಕ ವಿನಿಯೋಗಗಳು ಜರುಗಿದವು . ಆಗಮಿಸಿದ ಭಗವದ್ಭಕ್ತರಿಗೆ ಅಮೃತಾನ್ನ ವಿಭಾಗದಲ್ಲಿ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು . ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ […]

ಶಿವರಾತ್ರಿ ಮಹೋತ್ಸವ ಪ್ರಾರಂಭ

ಬುಧವಾರ, ಮಾರ್ಚ 6th, 2019

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಲಂಬಿ ಸಂವತ್ಸರದ ಶಿವರಾತ್ರಿ ಮಹೋತ್ಸವವು 28-02-2019 ಗುರುವಾರ ಗಣೇಶ ಪೂಜೆ ,ಮಹಾಸಂಕಲ್ಪ , ನಂದಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು . ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉಪಾಧಿವಂತ ಮಂಡಲದ ಸದಸ್ಯರು , ಆಡಳಿತಾಧಿಕಾರಿ ಶ್ರೀ […]

ಶಿವರಾತ್ರಿ ಮಹೋತ್ಸವ ನಿಮಂತ್ರಣ ಪತ್ರಿಕೆ

ಬುಧವಾರ, ಫೆಬ್ರವರಿ 20th, 2019

ಮಹಾಶಿವರಾತ್ರಿ 2019

ಶನಿವಾರ, ಫೆಬ್ರವರಿ 9th, 2019

। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2019 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಹೇಮಲಂಬ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

ಶಿವರಾತ್ರಿ ಮಹೋತ್ಸವ ಸಂಪನ್ನ

ಶನಿವಾರ, ಫೆಬ್ರವರಿ 24th, 2018

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾ ಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ರೂಢಿಗತ ಪರಂಪರೆಯಂತೆ ಸುಸಂಪನ್ನಗೊಂಡಿತು . ಶಿವರಾತ್ರಿ ಮಹೋತ್ಸವದ ಕೊನೆಯ ದಿನ (17-02-2018 ಶನಿವಾರ) ವೇ ಕೃಷ್ಣ ಭಟ್ ಷಡಕ್ಷರಿ ಅರ್ಚಕತ್ವದಲ್ಲಿ ಚೂರ್ಣೋತ್ಸವ, ಚೂರ್ಣಬಲಿ , ಮಹಾಪೂರ್ಣಾಹುತಿ , ಜಲಯಾನೋತ್ಸವ, ದೀಪೋತ್ಸವ, ಅವಭೃತ , ಅಂಕುರಾರ್ಪಣೆ , ಅಂಕುರಪ್ರಸಾದ ವಿತರಣಾ ಕಾರ್ಯಕ್ರಮಗಳು ಜರುಗಿದವು […]

ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ ಸಂಪನ್ನ

ಶುಕ್ರವಾರ, ಫೆಬ್ರವರಿ 16th, 2018

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಹೇಮಲ೦ಬ ಸಂವತ್ಸರದ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ ಸಂಪನ್ನಗೊಂಡಿತು . ಊರಿನ , ನಾಡಿನ ಭಕ್ತಜನತೆ, ವಿದೇಶೀ ಪ್ರವಾಸಿಗರು ಎಲ್ಲರೂ ‘ಹರ ಹರ ಮಹಾದೇವ’ ಘೋಷದೊಂದಿಗೆ ಸಾರ್ವಭೌಮ ಶ್ರೀ ಮಹಾಬಲನ ಮಹಾರಥ ಎಳೆದು ಸಂಭ್ರಮಿಸಿದರು . ಮಹಾರಥೋತ್ಸವ ಯಶಸ್ವಿಯಾಗುವಲ್ಲಿ ಸಹಕರಿಸಿದ ಸರ್ವರಿಗೂ ಉಪಾಧಿವಂತ ಮಂಡಳಿಯ ಅಧ್ಯಕ್ಷರಾದ ವೇ ಗಣೇಶ ಭಟ್ ಹಿರೇಗಂಗೆ […]

ಶಿವರಾತ್ರಿ ಮಹೋತ್ಸವ ಪ್ರಾರಂಭ :-

ಶುಕ್ರವಾರ, ಫೆಬ್ರವರಿ 9th, 2018

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲ೦ಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಇಂದು ಗಣೇಶ ಪೂಜೆ , ನಂದಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು . ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ವೇ ಕೃಷ್ಣ ಭಟ್ ಷಡಕ್ಷರಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉಪಾಧಿವಂತ ಮಂಡಲದ ಸದಸ್ಯರು , […]

ಶಿವರಾತ್ರಿ ಮಹೋತ್ಸವ - ನಿಮಂತ್ರಣ ಪತ್ರಿಕೆ

ಶುಕ್ರವಾರ, ಫೆಬ್ರವರಿ 2nd, 2018
Highslide for Wordpress Plugin