Donate

Help us to help others, please Donate

Related Links

e-Procurement Process 2015

Tender Application Form

Related Links

ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..

ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..

ಶುಕ್ರವಾರ, ಮಾರ್ಚ 15th, 2013

ಅಂಕುರಾರ್ಪಣೆಯೊಂದಿಗೆ ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ.. ಶಿವರಾತ್ರಿ ಮಹೋತ್ಸವದ ಪ್ರಾರಂಭದ ದಿನ ಮೃತ್ತಿಕಾ ಹರಣೋತ್ಸವ ಆಚರಿಸಿ ಆ ಮೃತ್ತಿಕೆಯ ಮೇಲೆ ನವಧಾನ್ಯವನ್ನು ಬಿತ್ತಲಾಗುತ್ತದೆ. ಶಿವರಾತ್ರಿಯ ಕೊನೆಯ ದಿನ ಶ್ರೀ ದೇವರು ಕೋಟಿತೀರ್ಥದಲ್ಲಿ ಅವಭೃತ ಸ್ನಾನ ಮುಗಿಸಿ ಮೊಳಕೆಯಾದ ಆ ನವ ಧಾನ್ಯವನ್ನು ಮಹಾಬಲೇಶ್ವರ ದೇವರಿಗೆ ಸಮರ್ಪಿಸಲಾಗುತ್ತದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಈ ಅಂಕುರಾರ್ಪಣೆ-ಪ್ರಸಾದ ವಿತರಣೆಯೊಂದಿಗೆ ನವ ದಿನಗಳ ವೈಭವದ ಶಿವರಾತ್ರಿ ಮಹೋತ್ಸವದ ಮಂಗಳವಾಯಿತು.

‘ಸಾರ್ವಭೌಮ’ ಪ್ರಶಸ್ತಿ ನೀಡಿ ಸನ್ಮಾನ .

‘ಸಾರ್ವಭೌಮ’ ಪ್ರಶಸ್ತಿ ನೀಡಿ ಸನ್ಮಾನ .

ಗುರುವಾರ, ಮಾರ್ಚ 14th, 2013

ಜಗದೀಶ್ವರನ ಜಗನ್ಮಂಗಲ ಶಿವರಾತ್ರಿ ಪರ್ವಕಾಲದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶಿಕ್ಷಣ ಕ್ಷೇತ್ರದ ಮಹಾನ್ ಸಾಧಕರಾದ ಶ್ರೀ ವಿನಯ್ ಹೆಗ್ಡೆ ನಿಟ್ಟೆ ಇವರಿಗೆ ಶ್ರೀ ಮಹಾಬಲೇಶ್ವರಾನುಗ್ರಹರೂಪವಾದ ‘ಸಾರ್ವಭೌಮ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. . ಶ್ರೀ ಪ್ರಮೋದ ಹೆಗಡೆ , ಶಿವರಾತ್ರಿ ಮಹೋತ್ಸವ ಸಮಿತಿ ಅದ್ಯಕ್ಷ ಡಾ. ವಿ.ಆರ್.ಮಲ್ಲನ್ ಹಾಗೂ ಸಮಿತಿ ಸದಸ್ಯರು, ನಾಗರೀಕರು ಉಪಸ್ಥಿತರಿದ್ದರು.

ಸಾರ್ವಭೌಮ  ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ.

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ.

ಮಂಗಳವಾರ, ಮಾರ್ಚ 12th, 2013

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ನಂದನ ಸಂವತ್ಸರದ ಮಹಾರಥೋತ್ಸವವು ಫಾಲ್ಗುಣ ಶುಕ್ಲ ಪ್ರತಿಪದೆ ದಿನವಾದ ಇಂದು ಸಾಯಂಕಾಲ ಜರುಗಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹರ ಹರ ಮಹಾದೇವ ಘೋಷಣೆಯೊಂದಿಗೆ ರಥಬೀದಿಯಲ್ಲಿ ವೆಂಕಟರಮಣ ದೇವಾಲಯದ ವರೆಗೆ ಸಾಗಿತು. ಭಕ್ತ ಸಾಗರ ಮಹಾಬಲನ ಮಹಾರಥವನ್ನು ಎಳೆದು ಪುನೀತರಾದರು.

ಮಹಾಶಿವರಾತ್ರಿ 2013

ರವಿವಾರ, ಜನವರಿ 20th, 2013

।। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2013 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ನಂದನ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

Mahashivaratri-2013

Mahashivaratri-2013

ಶನಿವಾರ, ಜನವರಿ 19th, 2013

|| PATU NITYAM MAHABALAH || MAHASHIVARATRI - 2013 Dear devotees of the Lord, Gokarna is the sacred soil where God Parameshwara took the form of an Atmalinga and settled down on earth. This place, which is the place, where universal protector the lord appeared on earth and […]

1

ಮಹಾರಥದ ಮಹಾ ಶೃಂಗಾರ..

ಬುಧವಾರ, ದಶಂಬರ 26th, 2012

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥವನ್ನು ಪ್ರತಿ ವತ್ಸರದಲ್ಲೂ ಶಿವರಾತ್ರಿ ಮಹೋತ್ಸವದಲ್ಲಿ ಶೃಂಗರಿಸಿ ಪಾಲ್ಗುಣ ಶುದ್ಧ ಪಾಡ್ಯದಂದು ರಥೋತ್ಸವ ನಡೆಯುತ್ತದೆ. ಮಹಾರಥವು ಬೃಹತ್ ಗಾತ್ರದಾಗಿದ್ದು ಅಷ್ಟ ಪಟ್ಟಿಗಳ ರಥ ಪೀಠವನ್ನು ಹೊಂದಿದೆ. ಸುಂದರವಾದ ಕೆತ್ತನೆ, ಭವ್ಯವಾದ ಆಕಾರದ ಈ ಮಹಾರಥವನ್ನು ಸ್ಥಳೀಯ ಹಾಲಕ್ಕಿ ಜನಾಂಗದವರು ರಥದ ಮೇಲ್ಭಾಗವನ್ನು ಕಟ್ಟಿ ಪತಾಕೆಗಳಿಂದ ಅಲಂಕರಿಸಿ ಮಹಾಬಲನ ಮಹಾರಥೋತ್ಸವಕ್ಕಾಗಿ ಅಣಿಗೊಳಿಸುತ್ತಾರೆ. ಈ ಮಹಾ ಶೃಂಗಾರದ ವಿವಿಧ ಹಂತಗಳು ಇಲ್ಲಿವೆ…

ಶಿವರಾತ್ರಿ ಉತ್ಸವದ ಆಹ್ವಾನ.

ಸೋಮವಾರ, ಫೆಬ್ರವರಿ 28th, 2011

ಗೋಕರ್ಣದ ಮಹಾಶಿವರಾತ್ರಿ ಉತ್ಸವ.”ಸುವಸ್ತುಸಂಗ್ರಹರಥ”ಸಂಚಾರ.

ಗುರುವಾರ, ಫೆಬ್ರವರಿ 3rd, 2011

ಜಗತ್ತಿನ ಮೊದಲ ಚಿತ್ರಕಾರ ಶಿವ - ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ರವಿವಾರ, ಫೆಬ್ರವರಿ 28th, 2010

ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು […]

Gokarna is changing .1- Sri Du.Gu.Lakshman

Gokarna Is Changing - Sri Du.Gu.Lakshman

ಮಂಗಳವಾರ, ಮಾರ್ಚ 3rd, 2009

Chief editor, Hosadiganta has written down his opinion about the Maha Shivaratri festival commenced at Gokarna last month. Please read and reply your opinion. s

Highslide for Wordpress Plugin