ಗೋಕರ್ಣ.೨೧ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಅವಿನಾಶ್ ರಾಮ್ಭಾವ್ ಪೋತದಾರ
ರೋಟರಿ ಜಿಲ್ಲಾ ಗವರ್ನರ ಬೆಳಗಾವಿ ಇವರು ೨೧ ಶನಿವಾರದಂದು ತಮ್ಮ ಶ್ರೀಮತಿಯವರೊಡನೆ ಆಗಮಿಸಿ
ಶ್ರೀ ದೇವರ ದರ್ಶನ ಪಡೆದು ತುಂಬಾ ಸಂತಸ ವ್ಯಕ್ತಪಡಿಸಿದರು.
ಶ್ರೀ ದೇವಾಲಯದ ಆಡಳಿತಕ್ಕೆ ಬೆಂಬಲಿಸಲು ತಾನು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುವುದಾಗಿ
ತಿಳಿಸಿದ್ದಲ್ಲದೆ, ರೋಟರಿ ಸಂಸ್ಥೆಯ ಅನುದಾನವನ್ನೂ ಈ ದೇವಾಲಯಕ್ಕೆ ಕೊಡಮಾಡುವುದಾಗಿ ತಿಳಿಸಿದರು.
ಗೋಕರ್ಣದ ರೋಟರಿ ಪದಾಧಿಕಾರಿಗಳಾದ ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಮಹೇಶ ಶೆಟ್ಟಿ ಹಾಗೂ ಕುಮಟಾದ
ರೋಟರಿ ಪದಾಧಿಕಾರಿಗಳು ಅವರ ಜೊತೆಗಿದ್ದರು
. ಶ್ರೀ ದೇವಾಲಯದ ಆಡಳಿತದ ಪರವಾಗಿ ಶ್ರೀ ಜಿ.ಕೆ. ಹೆಗಡೆ ಶಾಲು ಹೊದೆಸಿ ಸನ್ಮಾನಿಸಿದರು.