

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ
ಹೇಮಲ೦ಬ ಸಂವತ್ಸರದ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ ಸಂಪನ್ನಗೊಂಡಿತು . ಊರಿನ , ನಾಡಿನ ಭಕ್ತಜನತೆ, ವಿದೇಶೀ ಪ್ರವಾಸಿಗರು ಎಲ್ಲರೂ ‘ಹರ ಹರ ಮಹಾದೇವ’ ಘೋಷದೊಂದಿಗೆ ಸಾರ್ವಭೌಮ ಶ್ರೀ ಮಹಾಬಲನ ಮಹಾರಥ ಎಳೆದು ಸಂಭ್ರಮಿಸಿದರು . ಮಹಾರಥೋತ್ಸವ ಯಶಸ್ವಿಯಾಗುವಲ್ಲಿ ಸಹಕರಿಸಿದ ಸರ್ವರಿಗೂ ಉಪಾಧಿವಂತ ಮಂಡಳಿಯ ಅಧ್ಯಕ್ಷರಾದ ವೇ ಗಣೇಶ ಭಟ್ ಹಿರೇಗಂಗೆ , ಪ್ರಧಾನ ಅರ್ಚಕರಾದ ವೇ ಶಿತಿಕಂಠ ಹಿರೇಭಟ್ ಮತ್ತು ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಅಭಿನಂದನೆ ಸಲ್ಲಿಸಿದ್ದಾರೆ .