News


ರುದ್ರಾನುಷ್ಠಾನದಿಂದ ಲೋಕಕಲ್ಯಾಣ ಸಾಧ್ಯ-ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಶ್ರೀ.

ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ [...]


ಕೋಟಿರುದ್ರ ಷಷ್ಠ ಪರ್ವ – ಪತ್ರಿಕಾ ವರದಿಗಳು

ಕೋಟಿರುದ್ರ ಷಷ್ಠ  ಪರ್ವ  – ಪತ್ರಿಕಾ ವರದಿಗಳು


ಅಶೋಕೆಯಲ್ಲಿ ಗುರುಭವನಕ್ಕೆ ಶಿಲಾನ್ಯಾಸ.


Kotirudra.


ಗೋಕರ್ಣದ ಕೋಟಿರುದ್ರ.


ಮೇ.16 – ಗೋಬಂಧು – ಲೋಕಾರ್ಪಣೆ

ಗೋಕರ್ಣ:- ಶ್ರೀರಾಚಂದ್ರಾಪುರಮಠದ ನೂತನ ಗೋಬಂಧು ಯೋಜನೆಯನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಅಕ್ಷಯ ತೃತೀಯೆಯ ಶುಭ ದಿನದಂದು ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಲೋಕಾರ್ಪಣೆ ಮಾಡಿದರು. ಗೋಸಂರಕ್ಷಣೆ ಮಹಾಕಾರ್ಯದ ಸಂಬಂಧ ರೂಪಿಸಲಾದ ಈ ಹೊಸ ಯೋಜನೆ ಸಾಮಾನ್ಯರಿಗೆ ಸಹ ಗೋಸಂರಕ್ಷಣೆಯ ಅವಕಾಶ ಒದಗಿಸಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ೯೧-೯೪೮೧೯೦೮೧೩೧ ಅಥವಾ ೯೧- ೯೪೪೯೫೯೫೨೦೬ ಸಂಪರ್ಕಿಸಲು ಕೋರಲಾಗಿದೆ.


ಮೇ.16 – ಕೋಟಿ ರುದ್ರ ಜಪಾನುಷ್ಠಾನಕ್ಕೆ ಸಾಮಾಜಿಕ ಆಯಾಮ – ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

ಗೋಕರ್ಣ:- ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕಳೆದ ವರ್ಷದಿಂದ ಆರಂಭಿಸಲಾದ ಕೋಟಿರುದ್ರ ಜಪಾನುಷ್ಠಾನಕ್ಕೆ ನಾಡಿನಾದ್ಯಂತ ಉತ್ತಮ ಪೋಷಣೆ ಒದಗಿ ಬಂದಿದ್ದು, ಕಾರಣ ಇದಕ್ಕೆ ಒಂದು ಸಾಮಾಜಿಕ ಆಯಾಮ ನೀಡುವತ್ತ ಸಂಕಲ್ಪಿಸಲಾಗಿದೆ ಎಂದು ನುಡಿದರು. ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು. ವಿಶ್ವಕಲ್ಯಾಣಕ್ಕಾಗಿ ಸಂಘಟಿಸಲಾದ ಕೋಟಿರುದ್ರ ಜಪಾನುಷ್ಠಾನ ಶ್ರೀಮಂದಿರಕ್ಕೆ ಮಾತ್ರ ಸೀಮಿತವಾಗಿರಬಾರದು. ಈ ಅನುಷ್ಠಾನದ ಮೂಲಕ ಸಾಮಾಜಿಕ ಕಾರ್ಯ ಕೂಡಾ ಸಾಧಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ [...]


ಗೋಕರ್ಣದಲ್ಲಿ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

ಗೋಕರ್ಣ.ಮೇ೩ಜಗದ್ಗುರುಶ್ರೀಮಧ್ವಾಚಾರ್ಯ,ಶ್ರೀವಿಷ್ಣುತೀರ್ಥಸಂಸ್ಥಾನದಶ್ರೀಸೋದೆವಾದಿರಾಜಮಠದಪೀಠಾಧಿಪತಿಗಳಾದಪೂಜ್ಯಶ್ರೀಶ್ರಿವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಶ್ರೀಮಹಾಬಲೇಶ್ವರನನ್ನು ಅರ್ಚಿಸಿದರು.ಅಲ್ಲದೆ ಶ್ರೀ ಮಹಾಗಣಪತಿ ಹಾಗೂ ಶ್ರೀ ತಾಮ್ರಗೌರಿದೇವಾಲಯಗಳಿಗೂ ಭೇಟಿನೀಡಿಶ್ರೀದೇವರದರ್ಶನವನ್ನು ಪಡೆದರು.ಹಾಗೂ ಬದಲಾದ ಶ್ರೀದೇವಾಲಯದಲ್ಲಿನ ಆಡಳಿತವ್ಯವಸ್ಥೆಯನ್ನು,ಯಾತ್ರಿಕರಿಗೆಕಲ್ಪಿಸಲಾಗುತ್ತಿರುವ ಸೌಲಭ್ಯಗಳನ್ನುಕುರಿತು ಸಂತೋಷವ್ಯಕ್ತಪಡಿಸಿದರು.


ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀ ಚಂದ್ರಶೇಖರಸ್ವಾಮೀಜಿ

ಗೋಕರ್ಣ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಜ್ಯೋತಿಷಿ  ಶ್ರೀಚಂದ್ರಶೇಖರಸ್ವಾಮೀಜಿಯವರು ೨೪ ಶನಿವಾರದಂದು ಶ್ರೀಕ್ಷೇತ್ರಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀಮಹಾಬಲೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಅರ್ಚಿಸಿದರು. ಅಲ್ಲದೆ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕೋಟಿರುದ್ರಾನುಷ್ಠಾನವನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸ್ವಾಮೀಜಿ ದೇವಾಲಯವು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಹೊಸತನವನ್ನು ಕಂಡಿದೆ. ಯಾತ್ರಿಕ ಭಕ್ತರಿಗಾಗಿ ಅನೇಕ ಸುಧಾರಣೆಗಳನ್ನು ಆಡಳಿತ ವ್ಯವಸ್ಥೆ ಕೈಗೊಂಡಿದೆ. ಇದು ಅತ್ಯಂತ ಸಂತೋಷಕರವಾದ ವಿಷಯಎಂದು ಹೇಳಿ ಶ್ರೀದೇವಾಲಯದಿಂದ ಯಾತ್ರಿಕರಿಗಾಗಿ ನಡೆಯುತ್ತಿರುವ ಅಮೃತಾನ್ನ ಪ್ರಸಾದಭೋಜನ ವ್ಯವಸ್ಥೆಗಾಗಿ ಇಪ್ಪತ್ತೈದು ಸಾವಿರ [...]


ಮಾ ೨೦ – ಮಾಧ್ಯಮಗಳ ಹೊಣೆ ಹಿರಿದು – ಶ್ರೀ ಶ್ರೀಮದ್ರಾಘವೇಶ್ವರ ಭಾರತೀಶ್ರೀ

ಗೋಕರ್ಣ.ಮಾ೨೦ : ತಂತ್ರಜ್ಞಾನವು ಮುಂದುವರೆದಿರುವ ಈ ದಿನಗಳಲ್ಲಿ ಎಲ್ಲವೂ ಸ್ಪರ್ಧಾತ್ಮಕವಾಗಿ ಸಾಗುತ್ತಿದ್ದು ಮಾಧ್ಯಮಗಳೂ ಇದರಿಂದ ಹೊರತಾಗಿಲ್ಲ.ಹೊಸತನ್ನು ನೀಡಬೇಕೆಂಬಧಾವಂತದಲ್ಲಿ ಕೆಲವುಮಾದ್ಯಮಗಳು ವಿಷಯವನ್ನುವಸ್ತುನಿಷ್ಠವಾಗಿಸದೆ ಬೇರೆಯೇರೀತಿಯಲ್ಲಿ ಕೊಡುತ್ತಿರುವುದು ಅಪಾಯಕಾರಿಬೆಳವಣಿಗೆಯಾಗಿದೆ.ಕೇವಲ ಒಂದು ಪಾರ್ಶ್ವದವಿಚಾರವನ್ನು ಮಾತ್ರ ಅವಲಂಬಿಸದೆ ಸಮಗ್ರಮಾಹಿತಿಯನ್ನು ನೀಡುವುದಲ್ಲದೆ,ಋಣಾತ್ಮಕಚಿಂತನೆಯನ್ನು ದೂರಮಾಡಿ ಧನಾತ್ಮಕವಾದ ಅಂಶಗಳನ್ನು ಸಮಾಜದ ಮುಂದಿಡುವತ್ತ ಮಾಧ್ಯಮಗಳು ಗಮನ ನೀಡಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಆಭಿಪ್ರಾಯಪಟ್ಟಿದ್ದಾರೆ.ಶನಿವಾರ ಅಪರಾಹ್ಣ ಸಮೀಪದ ಅಶೋಕೆಯ ಶ್ರೀ ಗುರುನಿವಾಸದಲ್ಲಿ ನಡೆದ ನೂತನ ಖಾಸಗಿಪ್ರಸಾರದ ಗೋಕರ್ಣಶ್ರೀ ಮಾಸಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಅನುಗ್ರಹಭಾಷಣನೀಡುತ್ತಿದ್ದ ಪೂಜ್ಯ [...]