December 12th, 2011
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹ ಪಡೆದು , ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರೂಢಿಗತ ಪರಂಪರೆಯಂತೆ ದಿನಾಂಕ 24/11/2011 ಗುರುವಾರದಂದು (ಕಾರ್ತಿಕ ಬಹುಳ ಅಮಾವಾಸ್ಯೆ) ರಂಗಪೂಜೆಯು ನೆರವೇರಿತು. ಉಪಾಧಿವಂತ ಮಂಡಲದ ಸಲಹೆ ಪಡೆದು ಈ ಪೂಜಾ ಕಾರ್ಯಕ್ರಮವನ್ನು ವಿಶೇಷ ವೈಭವಗಳಿಂದ ಹಾಗೂ ಶೃದ್ಧಾ – ಭಕ್ತಿಯಿಂದ ನಡೆಸಲಾಯಿತು. 108 ಎಡೆಗಳಲ್ಲಿ ವಿಶೇಷ ಭಕ್ಷ ಭೋಜ್ಯಗಳನ್ನು ತಯಾರಿಸಿ ಮಹಾಬಲನಿಗೆ ನೈವೇದ್ಯ ಮಾಡಲಾಯಿತು. ಊರಿನ ಬಹಳ ಜನ ಬಂದು [...]
November 12th, 2011
ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಪ್ರಸಿದ್ಧ ತ್ರಿಪುರಾಖ್ಯದೀಪೋತ್ಸವವು ೧೦-ಗುರುವಾರದಂದು ಅತ್ಯಂತ ವೈಭವ ಮತ್ತು ವಿಜ್ರುಮ್ಭನೆಯಿಂದ ಸಂಪನ್ನವಾಯಿತು.ಸ್ಥಳೀಯ ಭಕ್ತರಲ್ಲದೆ
ನೆರೆ ಜಿಲ್ಲೆಗಳಾದ ಶಿವಮೊಗ್ಗ,ಮತ್ತು ಮಂಗಳೂರು ಮೊದಲಾದ ಪ್ರದೆಶಗಳಿಂದ ಬಂದ ಸಹಸ್ರಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕಾರ್ತಿಕಮಾಸದ ದೀಪವನ್ನು ಬೆಳಗುವುದರ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಧ್ಯಾಹ್ನ ಸಮೀಪದ ಭಿಮಕೊಂಡ ದಲ್ಲಿ ವಿಶೇಷ ಪೂಜೆ ಮುಗಿದನಂತರ ದೇವಾಲಯಕ್ಕೆ ಆಗಮಿಸಿದ ಮೇಲೆ ನಡೆದ ಈ ಉತ್ಸವ ಹಾಗೂ ನಡುರಾತ್ರಿಯಲ್ಲಿ ಕೋಟಿತೀರ್ಥದಲ್ಲಿ ನಡೆದ ಜಲಯಾನೋತ್ಸವ ಮತ್ತು [...]
June 19th, 2010
ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ [...]
June 17th, 2010
ಕೋಟಿರುದ್ರ ಷಷ್ಠ ಪರ್ವ – ಪತ್ರಿಕಾ ವರದಿಗಳು