

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಎಡೆ ಅಮಾವಾಸ್ಯೆ ಉತ್ಸವ (ರಂಗ ಪೂಜೆ) ದಿನಾಂಕ 29-11-2016 ಮಂಗಳವಾರ ರಾತ್ರಿ ಸಂಪನ್ನಗೊಂಡಿತು. 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಲಾಯಿತು . ನಂತರ ಮಹಾಪೂಜೆ , ಭೂತಬಲಿ , ರಥಬೀದಿಯಲ್ಲಿ ರಥೋತ್ಸವ ನೆರವೇರಿದವು . ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು .