Articles
ಶ್ರೀರುದ್ರಾಧ್ಯಾಯ
ಶಿವ. ಜಗತ್ತಿಗೆಶುಭವನ್ನು ಮಂಗಳವನ್ನು ನೀಡುವವ.ಲೋಕಹಿತಂಕರನಾದುದರಿಂದ ಈತ ಶಂಕರನೂ ಹೌದು.ನಮ್ಮ ಈ ಬವಬಂಧನಕ್ಕೆ ಈತನಿಂದಲೇ ಬಿಡುಗಡೆ.ಆದ್ದರಿಂದ ಇವನಿಗೆ ರುದ್ರ ಎಂದೂ ಹೆಸರು. ರುದ್ರಪ್ರೀತಿಕರವಿಧಾನಗಳಿಂದ ಪರಮೇಶ್ವರಾನುಗ್ರಹ ತೀರಸುಲಭ.ಎಂದೇ ಸಾಧನೆಯ ಪ್ರಪಂಚದಲ್ಲಿ,ಸಾಧಕರಪರಿಧಿಯಲ್ಲಿ ರುದ್ರಪಾರಾಯಣ,ರುದ್ರಾರ್ಚನೆಗಳಿಗೆ ಅತಿಶ್ರೇಷ್ಠಸ್ಥಾನ.
ನಮ್ಮ ಬದುಕಿನ ಉನ್ನತಿಗೆ ಪ್ರಾಚೀನವೈದಿಕಪರಂಪರೆಯು ತೋರಿಸಿದ ಅನುಷ್ಠಾನಗಳಪಂಕ್ತಿ ತುಂಬದೊಡ್ಡದು. ಅವುಗಳಲ್ಲಿ ಮೊದಲಸ್ಥಾನದಲ್ಲಿರುವುದು ಅತಿಪ್ರಾಚೀನ ಹಾಗೂಪ್ರಸಿದ್ಧವಾದದ್ದುರುದ್ರಾನುಷ್ಠಾನ.ಕಾರ್ಯಸೌಲಭ್ಯ ಮತ್ತು ಶೀಘ್ರಫಲಲಾಭ ಈ ಅನುಷ್ಠಾನದವೈಶಿಷ್ಟೈ.ಲೌಕಿಕವಾದ ಸುಖಸಂತೋಷಗಳಲ್ಲದೆ ಜನ್ಮಾಂತರಗಳ ಕರ್ಮಫಲರೂಪವಾದ ಸಂತಾಪವನ್ನುಶಮನಮಾಡುವಶಕ್ತಿಯೂ ಈ ಅನುಷ್ಠಾನಕ್ಕಿದೆಯೆಂಬುದು ಆಪಸ್ತಂಭ,ಪರಾಶರ ಮೊದಲಾದ ಸ್ಮೃತಿಗಳಲ್ಲಿ ಹಾಗೂ ಕೈವಲ್ಲ್ಯ, ಜಾಬಾಲೋಪನಿಷತ್ತುಗಳಲ್ಲಿಯೂ ಸಹ ಉಲ್ಲೇಖಿತ. ಶಾಂತಿ,ಪುಷ್ಟಿ,ತುಷ್ಟಿ [...]