

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಒಬ್ಬ ವಿಜ್ನಾನಿಯ ದೃಷ್ಟಿಯಿಂದ ಚಂದ್ರ ವೃದ್ಧಿಸುವುದೂ ಇಲ್ಲ,ಕ್ಷಯಿಸುವುದೂ ಇಲ್ಲ.ಸೂರ್ಯ-ಚಂದ್ರರ ಸ್ಥಿತಿಗತಿಗಳ ತಾರತಮ್ಯದಿಂದಾಗಿ ವೃದ್ಧಿಸಿದಂತೆ-ಕ್ಷಯಿಸಿದಂತೆ ತೋರುತ್ತಾನೆ.ಭೂಮಿಯ ಆಕರ್ಷಣೆಯನ್ನು ಮೀರಿ ಬಾಹ್ಯಾಕಾಶದಲ್ಲಿ ನಿಂತು ನೋಡಿದರೆ ಚಂದ್ರ ಸದಾ ಏಕರೂಪವಾಗಿಯೇ ಇರುವುದು ಅರಿವಾಗುತ್ತದೆ.ಭೌತಿಕ ಆಕರ್ಷಣೆಗಳನ್ನು ಮೀರಿ ಹೃದಯಾಕಾಶದಲ್ಲಿ ನಿಂತು ನೋಡುವ ಜ್ನಾನಿ,ಹುಟ್ಟು-ಬೆಳವಣಿಗೆ -ಸಾವುಗಳಿಲ್ಲದೇ ಆತ್ಮ ಸದಾ ಏಕರೂಪವಾಗಿಯೇ ಇರುವುದನ್ನು ಅರಿಯುತ್ತಾನೆ.