

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಹತ್ಯೆಯಂತಹ ಮಹಾಪಾತಕ ನಡೆಯುತ್ತಿರುವ ಅಖಂಡ ಭೂಮಂಡಲವಿಂದು ಸೂತಕದ ಮನೆಯಾಗಿದೆ.ನಾವು ಮಾಡುತ್ತಿರುವ ಪಾಪದ ಕೊಳೆಯನ್ನು ತೊಳೆಯಲು ವರ್ಷಾನುಗಟ್ಟಲೆ ಮಳೆ ಮುಸಲಧಾರೆಯಾಗಿ ಸುರಿದರೂ ಸಾಲದೆಂತೆನಿಸುತ್ತದೆ.ತನ್ನ ಅಮೃತಮಯವಾದ ಹಾಲಿನಿಂದ ಜನರ ಒಡಲನ್ನು ತಂಪಾಗಿಸಿದವಳು ಆಕೆ.ದುರಂತವೆಂದರೆ ಇಂದು ಆಕೆಯ ಒಡಲನ್ನೇ ಹರಿಯಲು ಮುಂದಾಗಿದ್ದೇವೆ.ಈ ಪಾತಕವನ್ನು ದೈವ ಎಂದೂ ಕ್ಷಮಿಸದು.