

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
“ಸ್ವರ್ಗ-ನರಕಗಳು ಮಾನವನ ಜೀವನಮಾರ್ಗವನ್ನು ನಿರ್ದೇಶಿಸುತ್ತಿವೆ.ನರಕದ ಭೀತಿ ಮನುಷ್ಯ ಪಾಪಕರ್ಮಕ್ಕೆ ಇಳಿಯುವುದನ್ನು ತಪ್ಪಿಸಿದರೆ,ಸ್ವರ್ಗದ ಅಭಿಲಾಷೆ ಸತ್ಕರ್ಮದೆಡೆಗೆ ಮನಸ್ಸನ್ನು ಪ್ರೇರೇಪಿಸುತ್ತದೆ.ಮನುಷ್ಯ ಸಹಜವಾದ ಆಸೆ-ಭೀತಿಗಳನ್ನು ನಮ್ಮ ಪೂರ್ವಜರು ಮಾನವನ ಒಳಿತಿಗೆ ಉಪಯೋಗಿಸಿದರು.ಎಳವೆಯ ಸುಬೋಧೆ ಪಶುವಿನಂತಹ ಶಿಶುವನ್ನು ಮಾನವನನ್ನಾಗಿ ಮಾಡುತ್ತದೆ.ಮಾನವನನ್ನು ದಾನವನಾಗಬಿಡದೇ ಮಾಧವನನ್ನಾಗಿಸುತ್ತದೆ.”