

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
“ಪರಿಪೂರ್ಣ ಶಾಂತಿ ಲಭಿಸುವುದು ಏಕಾಂತವಾಸದಲ್ಲಿ ಮಾತ್ರ.ಬಹುಜನರಿದ್ದರೆ ಒಮ್ಮೆ ಪ್ರೀತಿಯ ನಿನಾದ:ಇನ್ನೊಮ್ಮೆ ದ್ವೇಶದ ಆಸ್ಫೋಟ.ಒಂದೆಡೆ ಕರುಣೆಯ ವೀಣೆ ಮಿಡಿದರೆ,ಇನ್ನೊಂದೆಡೆ ಹೃದಯ ಭೇದಿಸುವ ಕ್ರೌರ್ಯದ ತಮಟೆ.ಅಂತರಂಗ ವಿಹಾರಿಗಳಾದ ಮಹರ್ಷಿಗಳು ಶಾಂತಿಯನ್ನು ಅರಸಿದ್ದು ಹೃದಯಾಲಯದಲ್ಲಿ.ಅದನ್ನು ಪ್ರತಿನಿಧಿಸುವ ಗಿರಿ-ಗುಹೆ-ಗಹ್ವರಗಳಲ್ಲಿ.ಶಾಂತಿಯಿರುವುದು ಬೆಳ್ಳಿಯ ಮಾತಿನಲ್ಲಲ್ಲ:ಬಂಗಾರದ ಮೌನದಲ್ಲಿ.ಓ ಮೌನವೇ ! ನೀ ಶಾಂತಿಯ ಬಯಸುವೆಯಾದರೆ ಲೋಕಾಂತರದ ದೊಂಬರಾಟವ ಬಿಟ್ಟು ಅಂತರಂಗದಲ್ಲೇರ್ಪಡುವ ಏಕಾಂತದ ಮೌನಕ್ಕೆ ಶರಣಾಗು.”