“ಗೋಕರ್ಣ ಗೌರವ” ದಿನ - 7
ಸೋಮವಾರ, ಜನವರಿ 16th, 2017ಗೋಕರ್ಣ ಗೌರವ ಕಾರ್ಯಕ್ರಮದ ಏಳನೇ ದಿನ (15-01-2017) ರವಿವಾರ ಪ.ಪೂ.ಮ.ನಿ.ಪ್ರ. ಮಹಾಲಿಂಗ ಸ್ವಾಮೀಜಿ ಪೂರ್ಣಗಿರಿ ವಿರಕ್ತಮಠ , ಯದಲದೊಡ್ಡಿ ಸಿಂಧನೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಹಾಗೂ ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಪೂಜೆಯ ವ್ಯವಸ್ಥೆ ಕುರಿತು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು .

















