ಶ್ರಾವಣ ಸೋಮವಾರ - ವಿಶೇಷ ಪೂಜೆ
ಸೋಮವಾರ, ಆಗಸ್ತು 8th, 2016ಶ್ರಾವಣ ಮಾಸದ ಸೋಮವಾರದ ಪುಣ್ಯ ಪರ್ವ ಕಾಲದಲ್ಲಿ ಆತ್ಮಲಿಂಗರೂಪಿ, ಮಹಾಬಲೇಶ್ವರ ದೇವರಿಗೆ ವಿಶೇಷಗಟ್ಲೆ ಪೂಜೆ .


Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರಾವಣ ಮಾಸದ ಸೋಮವಾರದ ಪುಣ್ಯ ಪರ್ವ ಕಾಲದಲ್ಲಿ ಆತ್ಮಲಿಂಗರೂಪಿ, ಮಹಾಬಲೇಶ್ವರ ದೇವರಿಗೆ ವಿಶೇಷಗಟ್ಲೆ ಪೂಜೆ .
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕಾರ್ಕಳದ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಶ್ರೀ ವಿ. ಸುನಿಲ್ ಕುಮಾರ್ ಇವರು ಈ ದಿನ ಕುಟುಂಬ ಸಮೇತ ಆಗಮಿಸಿ ಶ್ರೀ ದೇವರಿಗೆ ಅಭಿಷೇಕ-ಪೂಜೆ ಸಲ್ಲಿಸಿದರು . ಆನಂತರ ಶ್ರೀ ದೇವಾಲಯದ ಗೋಶಾಲೆಗೆ ಆಗಮಿಸಿ ಗೋಪೂಜೆ ನೆರವೇರಿಸಿದರು . ವೇ ರಾಮಕೃಷ್ಣ ಶಂಕರಲಿಂಗ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿದರು . ಶ್ರೀಮಠದ ದೇಶೀ ತಳಿಯ ಗೋ ಸಂರಕ್ಷಣೆಯ […]
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ವಿಶೇಷ ಪೂಜೆ, ಕೊನೆಯಲ್ಲಿ ರುದ್ರಹೋಮದೊಂದಿಗೆ ಸಂಪನ್ನಗೊಂಡಿತು .
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ದಿ 31-07-2016 ರವಿವಾರ ಮುಂಜಾನೆ ಪ್ರಾರಂಭಗೊಂಡು 01-08-2016 ಸೋಮವಾರ ಮುಂಜಾನೆವರೆಗೆ ರೂಢಿಗತ ಪರಂಪರೆಯಂತೆ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಜರುಗಲಿದೆ . ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ಒಂದು ವಿಶೇಷ ಪೂಜೆ, ಕೊನೆಯಲ್ಲಿ ಹೋಮ ಇರುವುದು […]
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಗುರುಪೂರ್ಣಿಮೆ ಪ್ರಯುಕ್ತ ದತ್ತಾತ್ರೇಯ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . ಶ್ರೀಪಾದ ಶ್ರೀ ವಲ್ಲಭರು ಈ ಸ್ಥಳದಲ್ಲಿ ಬಹಳ ಕಾಲ ತಪಸ್ಸನ್ನು ಆಚರಿಸಿದ್ದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ […]
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಚಿಂತಾಮಣಿ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ನೂತನ ರಜತ ಕವಚ ಸಮರ್ಪಿಸಲಾಯಿತು. ನವಗ್ರಹ ಹೋಮ, ಅಥರ್ವಶೀರ್ಷ ಹವನ , ದುರ್ಗಾಶಾಂತಿ ಕಾರ್ಯಕ್ರಮ ಸಂಪನ್ನಗೊಂಡಿತು . ಉಪಾಧಿವಂತ ಮಂಡಳಿಯ ಸದಸ್ಯರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು .
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚವನ್ನು ಶಾಸ್ತ್ರೋಕ್ತವಾಗಿ ತೊಡಿಸಲಾಯಿತು . ಈ ಸಂದರ್ಭದಲ್ಲಿ ವೇ ಗಣೇಶ ಭಟ್ ಹಿರೇಗಂಗೆ, ವೇ ಶಿತಿಕಂಠ ಹಿರೇಭಟ್ , ವೇ ಕೃಷ್ಣ ಭಟ್ ಷಡಕ್ಷರಿ , ವೇ ಗಣೇಶ ಭಟ್ ಜಂಭೆ , ವೇ ವಿನಾಯಕ ರಮಣಿ ಪ್ರಸಾದ , ಆಡಳಿತಾಧಿಕಾರಿ […]
ಮಹಾರಾಷ್ಟ್ರದ ಶ್ರೀ ಶ್ರೀ ಸಮೀರಗುರೂಜಿಯವರ ಅನುಯಾಯಿಗಳಿಂದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಮಹಾರುದ್ರ ಸೇವೆ ಸಂಪನ್ನಗೊಂಡಿತು .
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ‘ಜೀವಜಲ ಉಚಿತ ವಿತರಣಾ’ ಯೋಜನೆಯಡಿ ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಉಚಿತವಾಗಿ ಶುದ್ಧವಾದ ಕುಡಿಯುವ ನೀರು ಪೂರೈಸಲಾಗುತ್ತಿದೆ . ಈ ಜನಪರ ಯೋಜನೆಯ ಬಗ್ಗೆ ತಿಪ್ಪಸಗಿ, ಕಟನಬಾವಿ ಗ್ರಾಮದ ಫಲಾನುಭವಿ ಜನರು ಕೃತಜ್ಞತೆ ವ್ಯಕ್ತಪಡಿಸಿ , ಈ ಯೋಜನೆ ಪ್ರಾರಂಭಿಸಿದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರನ್ನು ನೆನೆದು ಶೃದ್ಧಾ ಭಕ್ತಿಗಳಿಂದ ಫಲ ಸಮರ್ಪಿಸಿದರು . ಕುಡಿಯಲೂ ಸಹ ಹನಿ ನೀರಿಲ್ಲದ ಕಷ್ಟದ ಸಮಯದಲ್ಲಿ ಈ ಯೋಜನೆಯಿಂದ ಬಹಳ […]
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ದಿ 23-05-2016 ಸೋಮವಾರ ಪುತ್ತಿಗೆ ಮಠದ ಶ್ರೀಮದ್ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಗಳವರು ಭೇಟಿ ನೀಡಿ ಅಭಿಷೇಕ, ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿದರು . ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ ಗೌರವಿಸಿದರು . ವೇ ಶಿತಿಕಂಠ ಹಿರೇಭಟ್ , ವೇ ಪರಮೇಶ್ವರ ಮಾರ್ಕಾಂಡೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು .