

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2017 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]
ಗೋಕರ್ಣ ಗೌರವ : - ದಿನ - 18 (ಗುರುವಾರ : 26-01-2017) ಶ್ರೀ ಶ್ರೀ ಮಲ್ಲಿಕಾರ್ಜುನ ದೇವರು - ಕಸ್ತೂರಿ ಮಠ , ಗದ್ದಿನಕೇರಿ ಬಾಗಲಕೋಟ ಈ ದಿನದ ‘ಗೋಕರ್ಣ ಗೌರವ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ ಗೌರವ ಸಲ್ಲಿಸಿದರು .
ಗೋಕರ್ಣ ಗೌರವ : ದಿನ-17 ( 25-01-2017 — ಬುಧವಾರ ) ಶ್ರೀ ಶ್ರೀ ಓಹಿಲೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು - ಕಸ್ತೂರಿ ಮಠ , ಗದ್ದಿನಕೇರಿ ಬಾಗಲಕೋಟ ಮತ್ತು ಶ್ರೀ ಸದ್ಗುರು ಮರುಳ ಶಂಕರ ಸ್ವಾಮಿಗಳು ಶ್ರೀ ಸಿದ್ದಾರೂಢ ಆಶ್ರಮ ಗಂಗಾಪುರ , ರಾಣೆಬೆನ್ನೂರು ಇವರುಗಳು ಈ ದಿನದ ‘ಗೋಕರ್ಣ ಗೌರವ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು .
ಗೋಕರ್ಣ ಗೌರವ : ದಿನ-16 (24-01-2017- ಮಂಗಳವಾರ ) ಶ್ರೀ ಷ ಬ್ರ ೧೦೮ ನಂದಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ನಂದಿಕೇಶ್ವರ ಸಂಸ್ಥಾನಮಠ, ಸೋನಪೇಟ ಹಾಗೂ ಶ್ರೀ ಶ್ರೀ ಮಡಿವಾಳೇಶ್ವರ ಸ್ವಾಮೀಜಿ ಗದ್ದಿಗೆಮಠ , ಕೊತಕನೂರು ಇವರು ‘ಗೋಕರ್ಣ ಗೌರವ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಮತ್ತು ಉಪಾಧಿವಂತ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ […]
ಗೋಕರ್ಣ ಗೌರವ : ದಿನ-15 (23-01-2017 - ಸೋಮವಾರ ) ಶ್ರೀ ಶ್ರೀ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳವರು ಬಸವನಬಾಗೇವಾಡಿ , ವಿಜಯಪುರ ಇವರು ‘ಗೋಕರ್ಣ ಗೌರವ’ ಕಾರ್ಯಕ್ರಮದ ಹದಿನೈದನೇ ದಿನವಾದ ಇಂದು ಸಾನ್ನಿಧ್ಯ ವಹಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು . ಯತಿಗಳಿಂದ ಆತ್ಮಲಿಂಗ ಪೂಜೆ ಮಾಡಿಸುತ್ತಿರುವುದು ಬಹಳ ಪುಣ್ಯ ಕಾರ್ಯ ಎಂದರು . ಹಾಗೂ ಶ್ರೀ ಶ್ರೀ ರಾಘವೇಶ್ವರ ಶ್ರೀಗಳವರ ಕ್ಷೇತ್ರದ ಅಭಿವೃದ್ಧಿಯನ್ನು ಪ್ರಶಂಸಿಸಿದರು .
ಗೋಕರ್ಣ ಗೌರವ : ದಿನ-14 (22-01-2017 - ರವಿವಾರ) ಶ್ರೀ ಶ್ರೀ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳವರು ಗುಳೇದಗುಡ್ಡ ಹಾಗೂ ಶ್ರೀ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು - ಶ್ರೀಧರ ಮುರುಡಿ ಹಿರೇಮಠ, ಯಲಬುರ್ಗಾ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ‘ಗೋಕರ್ಣ ಗೌರವ’ ಕಾರ್ಯಕ್ರಮದ ೧೪ ನೇ ದಿನದ ಸಾನ್ನಿಧ್ಯ ವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಶ್ರೀ ಶ್ರೀ ರಾಮಧೂತ ಬಿಂದು ಮಾಧವ ಗುರೂಜಿ - ಶ್ರೀ ವೀರ ಪ್ರತಾಪ ಆಂಜನೇಯ […]
“ಗೋಕರ್ಣ ಗೌರವ” ದಿನ - 13 (21-01-2017 ಶನಿವಾರ ) ಶ್ರೀ ಶ್ರೀ ವಿರೂಪಾಕ್ಷ ದೇವರು ಕೊಣ್ಣೂರು ಬೆಳಗಾವಿ ಇವರು “ಗೋಕರ್ಣ ಗೌರವ” ಕಾರ್ಯಕ್ರಮದ ೧೩ ನೇ ದಿನ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ ಗೌರವ ಸಲ್ಲಿಸಿದರು .ಶ್ರೀ ಶ್ರೀ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಅಕ್ಕಲಕೋಟೆ ಹಿರೇಮಠ ಇವರು ಉಪಸ್ಥಿತರಿದ್ದರು.
ಗೋಕರ್ಣ ಗೌರವ ದಿನ - 12 (ಶುಕ್ರವಾರ ) ಶ್ರೀ ಶ್ರೀ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಅಕ್ಕಲಕೋಟೆ ಹಿರೇಮಠ ಇವರು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ, “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.
ಗೋಕರ್ಣ ಗೌರವ : ದಿನ - 11 (19-01-2017 ಗುರುವಾರ ) ಶ್ರೀ ಷ .ಬ್ರ . ಜಗದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಧಾರವಾಡ ಇವರು ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ವಿಘ್ನೇಶ್ವರ ಶಾಸ್ತ್ರಿ ಕೊಡಗಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು . ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು. “ಪುರಾಣಪ್ರಸಿದ್ಧ ಗೋಕರ್ಣ ಕ್ಷೇತ್ರದಲ್ಲಿ […]