

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪ್ರವಾಸಕ್ಕೆ ಬಂದ ಮಕ್ಕಳು , ಯಾತ್ರಿಕ ಭಜಕರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ “ಅಮೃತಾನ್ನ” ಪ್ರಸಾದ ಭೋಜನ ಸ್ವೀಕರಿಸುತ್ತಿರುವ ಸುಂದರವಾದ ಕ್ಷಣ . ರಾಜ್ಯದ ವಿವಿಧ ಭಾಗಗಳಿಂದ ಶಾಲಾ ಮಕ್ಕಳು ತಂಡೋಪತಂಡವಾಗಿ ಬಂದು ,ಮಧ್ಯಾಹ್ನ ಮತ್ತು ಸಾಯಂಕಾಲ ಎರಡೂ ಹೊತ್ತು ಪ್ರಸಾದ ಭೋಜನ ಸ್ವೀಕರಿಸುತ್ತಿರುವುದನ್ನು ನಾವು ಕಾಣಬಹುದು . ನಿನ್ನೆ ಮಧ್ಯಾಹ್ನ , ಸಾಯಂಕಾಲ ಸೇರಿ ೩೫ ಶಾಲೆಯ ಸಾವಿರಾರು ಮಕ್ಕಳು ಪ್ರಸಾದ ಭೋಜನ ಸ್ವೀಕರಿಸಿದರು . ಸಾರ್ವಭೌಮ ಮಹಾಬಲೇಶ್ವರ ದೇವರ ಕೃಪೆಯಿಂದ , ಪರಮಪೂಜ್ಯ ಶ್ರೀ ಶ್ರೀಗಳವರ ದಿವ್ಯ ಮಾರ್ಗದರ್ಶನದಲ್ಲಿ ಎಲ್ಲವೂ ಸುಗಮವಾಗಿ , ಸಮೃದ್ಧವಾಗಿ , ಶಾಂತವಾಗಿ ನಡೆಯುತ್ತಿದೆ .