

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹದಿಂದ ಮತ್ತು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ನಂದಿ ಮಂಟಪದಲ್ಲಿರುವ ಶಿಲಾ ಕಂಬದಲ್ಲಿರುವ ಆಂಜನೇಯ ಮೂರ್ತಿಗೆ ರಜತ ಕವಚವನ್ನು ಗುರುಪೂರ್ಣಿಮೆಯ ಪುಣ್ಯ ಪರ್ವಕಾಲದಲ್ಲಿ ಸಮರ್ಪಿಸಲಾಯಿತು . ವೇ ಶಿತಿಕಂಠ ಹಿರೇ ಭಟ್ ಇವರ ನೇತೃತ್ವದಲ್ಲಿ ಉಪಾಧಿವಂತ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು . ಶ್ರೀ ದೇವಾಲಯದ ಪೂಜಾ ವಿಧಾನದಲ್ಲಿ ಮತ್ತೊಂದು ಹೆಜ್ಜೆ ಭಕ್ತಜನರ ಸಹಕಾರದಿಂದ ಮುಂದುವರಿದಿದೆ .