

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಕದಿರು ಹರಣೋತ್ಸವವು ದಿ 03-10-2016 ಸೋಮವಾರ ಜರುಗಲಿದೆ .
ತತ್ಸಂಬಂಧವಾಗಿ ರವಿವಾರ ರಾತ್ರಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಂದಿಗೆ ಹೊರಟು ಬಂಕಿಕೊಡ್ಲ ತಲುಪುವುದು .
ಮರುದಿನ ಸೋಮವಾರ - ನಸುಕಿನಲ್ಲಿ ಭತ್ತದ ಗದ್ದೆಗೆ ಹೋಗಿ ಭತ್ತದ ಬೆಳೆಯನ್ನು ಕೊಯ್ದು ಪೂಜೆ ಸ್ವೀಕರಿಸುವುದು . ಜಗತ್ತಿಗೆ ಅನ್ನ ನೀಡುವ ರೈತ ಸಮುದಾಯ ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿ ತಮ್ಮ ಗದ್ದೆಯ ಕೆಲ ಕದಿರನ್ನು ಶ್ರೀ ದೇವರಿಗೆ ಸಮರ್ಪಿಸುವರು .
ಈ ಪೂಜೆಯನ್ನು ಸ್ವೀಕರಿಸುತ್ತಾ , ಕದಿರನ್ನು ಪ್ರಸಾದ ರೂಪದಲ್ಲಿ ನೀಡುತ್ತ ಶ್ರೀ ದೇವರ ಉತ್ಸವವು ಸೋಮವಾರ ಮಧ್ಯಾಹ್ನ ಶ್ರೀ ದೇವಾಲಯಕ್ಕೆ ಮರಳುವುದು . ಶಾಸ್ತ್ರೀಯ ಪೂಜಾ ವಿಧಾನ ಹಾಗೂ ನೇಗಿಲಯೋಗಿಯ ಒಳಿತಿಗಾಗಿ ಪ್ರಾರ್ಥಿಸಿ ಜನಪದೀಯ ಪರಿಕಲ್ಪನೆಯಲ್ಲಿ ಕದಿರು ಹರಣೋತ್ಸವ ಆಚರಿಸಲ್ಪಡುವುದು .