

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ,
ನೈವೇದ್ಯ, ಪೂಜೆ ನೆರವೇರಿಸಲಾಯಿತು.
ಇಂದು ನವಮಿಯಂದು ‘ದಧಿ ಶಿಕ್ಯೋತ್ಸವ’ - ಸಂಜೆ ಐದು ಘಂಟೆಗೆ ಶ್ರೀ ದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ
ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ .
ಅಲ್ಲಲ್ಲಿ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗು ತೆಂಗಿನ ಕಾಯಿ ಒಡೆಯುವುದು ಈ ಉತ್ಸವದ ವಿಶೇಷ .
ಈ ಉತ್ಸವಕ್ಕೆ ದಧಿ ಶಿಕ್ಯೋತ್ಸವ ಎಂದು ಕರೆಯುತ್ತಾರೆ .